ಆನೆ ದಾಳಿ: ಫಸಲು ನಾಶ

ರಾಮನಗರ: ತಾಲ್ಲೂಕಿನ ಕಾಡನಕುಪ್ಪೆ ಗ್ರಾಮದಲ್ಲಿ ಆನೆಗಳ ಹಿಂಡು ದಾಳಿ ಮಾಡಿದ್ದು, ವಿವಿಧ ಬೆಳೆಗಳನ್ನು ನಾಶಪಡಿಸಿವೆ.
ಭಾನುವಾರ ರಾತ್ರಿ ಕಾಡನಕುಪ್ಪೆ ಗ್ರಾಮದ ಸ್ವಾಮಿ ಎಂಬುವರಿಗೆ ಸೇರಿದ 5 ತೆಂಗಿನಮರ, ನೀರಿನ ಪೈಪ್, ಸತೀಶ್ ಅವರ ತೋಟದಲ್ಲಿನ 8 ತೆಂಗಿನಮರ, ಹನಿ ನೀರಾವರಿ ಪೈಪು, ಚಿಕ್ಕಕಾಡಯ್ಯ ಅವರ 4 ಮಾವಿನಮರ, 5 ತೆಂಗಿನಗಿಡ, ನೀರಿನ ಪೈಪುಗಳನ್ನು ಆನೆಗಳನ್ನು ನಾಶಪಡಿಸಿವೆ.
ಕಾವೇರಿ ವನ್ಯಜೀವಿಧಾಮದಿಂದ ಬಂದು ಕಳೆದ ಎರಡು ತಿಂಗಳಿಂದ ತೆಂಗಿನಕಲ್ಲು ಅರಣ್ಯದಲ್ಲಿ ಬೀಡು ಬಿಟ್ಟಿರುವ ಆನೆಗಳು ರಾತ್ರಿ ವೇಳೆ ಅರಣ್ಯದಂಚಿನ ಕಾಡನಕುಪ್ಪೆ, ಹೊಸದೊಡ್ಡಿ, ಕುರುಬಳಳ್ಳಿದೊಡ್ಡಿ, ತೆಂಗಿನಕಲ್ಲು, ದೇವರದೊಡ್ಡಿ, ನೆಲಮಲೆ ಗ್ರಾಮಗಳ ಆಸುಪಾಸಿನಲ್ಲಿ ಓಡಾಡುತ್ತ ವಿವಿಧ ಫಸಲು, ಮರ ಹಾಗೂ ಬೋರ್ವೆಲ್ ಪರಿಕರಗಳನ್ನು ನಾಶ ಮಾಡುತ್ತಲೇ ಇವೆ ಎಂದು ಸ್ಥಳೀಯರು ದೂರಿದರು.
ಅರಣ್ಯಾಧಿಕಾರಿಗಳು ತೆಂಗಿನಕಲ್ಲು ಅರಣ್ಯದಲ್ಲಿ ಬೀಡುಬಿಟ್ಟ ಆನೆಗಳನ್ನು ಅವುಗಳ ಸ್ವಸ್ಥಾನ ಸೇರಿಸುವ ಕೆಲಸ ಮಾಡಬೇಕು. ಗ್ರಾಮದ ಆಸುಪಾಸಿನ ರೈತರ ಜಮೀನಿನ ಕಡೆ ಬರದಂತೆ ಆನೆಗಳನ್ನು ತಡೆಯಬೇಕು. ನಷ್ಟವಾದ ಬೆಳೆಗೆ ಸೂಕ್ತವಾದ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಅರಣ್ಯಾಧಿಕಾರಿಗಳನ್ನು ರೈತ ಸತೀಶ್ ಒತ್ತಾಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.