ಕೆಂಗಲ್ ಗ್ರಾಮದ ರುದ್ರಪ್ಪ ಅವರ ತೋಟಕ್ಕೆ ನುಗ್ಗಿರುವ ಆನೆಗಳು ತೆಂಗಿನ ಮರಗಳನ್ನು ಮುರಿದು, ಇತರೆ ಬೆಳೆಗಳನ್ನು ನಾಶಪಡಿಸಿವೆ. ‘ಈಗಾಗಲೇ ಆರೇಳು ಬಾರಿ ನಮ್ಮ ತೋಟಕ್ಕೆ ನುಗ್ಗಿ ಫಸಲು ಹಾಗೂ ತೆಂಗಿನ ಮರಗಳನ್ನು ಆನೆಗಳು ನಾಶಪಡಿಸಿದ್ದವು. ಈಗ ಮತ್ತೆ ತೆಂಗಿನ ಗಿಡಗಳು ಹಾಗೂ ಫಸಲನ್ನು ಹಾಳು ಮಾಡಿವೆ. ಇದುವರೆಗೂ ತಮಗಾದ ನಷ್ಟಕ್ಕೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ದೊರೆತಿಲ್ಲ. ಈಗ ಮತ್ತದೆ ಸಂಕಷ್ಟವನ್ನು ಗಜಪಡೆ ತಂದಿಟ್ಟಿವೆ’ ಎಂದು ರೈತ ರುದ್ರಪ್ಪ ಅಳಲು ತೋಡಿಕೊಂಡರು.