ಕಲ್ಲಹಳ್ಳಿ ಶ್ರೀನಿವಾಸ ದೇವಾಲಯವು ಮುಜರಾಯಿಇಲಾಖೆಗೆ ಸೇರಿದ್ದು ‘ಎ’ ಗ್ರೇಡ್ ದೇವಾಲಯವಾಗಿದೆ. ಸರ್ಕಾರ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಅವಕಾಶ ನೀಡದೆ ಕೊನೆಯ ಕ್ಷಣದಲ್ಲಿ ಸರಳವಾಗಿ ಆಚರಣೆ ಮಾಡಲು ಅನುಮತಿ ನೀಡಿತ್ತು. ಹಾಗಾಗಿ,ಜಾತ್ರೆಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಧ್ಯಾಹ್ನದ ವೇಳೆಗೆ ನಡೆಯಬೇಕಿದ್ದ ರಥೋತ್ಸವವನ್ನು ಬೆಳಿಗ್ಗೆ 8ಗಂಟೆಗೆ ಸಾಂಕೇತಿಕವಾಗಿ ನಡೆಸಲಾಯಿತು.