ಮಂಗಳವಾರ ಬೆಳಗ್ಗೆ ಯೋಗೇಶ್ ಪಾಸ್ ಪುಸ್ತಕ ಹಾಜರುಪಡಿಸಿದ್ದು, ಮತ್ತೆ ಹರಾಜಿನಲ್ಲಿ ಗೂಡು ಮಾರಾಟ ಮಾಡಿದರು. ಆಗಲೇ ಒಂದು ದಿನವಾದ್ದರಿಂದ ಗೂಡು ಕೊಂಚ ಹಾಳಾಗಿದ್ದು, ಕಡಿಮೆ ಬೆಲೆಗೆ ಹರಾಜಾಯಿತು. ಇದರಿಂದ ಮನನೊಂದ ಅವರು ತನಗೆ ಆಗಿರುವ ನಷ್ಟ ತುಂಬಿಕೊಡುವಂತೆ ಮಾರುಕಟ್ಟೆ ಅಧಿಕಾರಿಗಳನ್ನು ಒತ್ತಾಯಿಸಿದರು. ಆದರೆ ತಮ್ಮ ಕರ್ತವ್ಯ ನಿರ್ವಹಿಸಿದ್ದು, ಯಾವ ಕಾರಣಕ್ಕೂ ನಷ್ಟ ಭರಿಸಲು ಆಗದು ಎಂದು ಮಾರುಕಟ್ಟೆ ಅಧಿಕಾರಿಗಳು ಸಮಜಾಯಿಷಿ ನೀಡಿದರು.