ಗ್ರಾಮದ ಗೌರಮ್ಮ ಪುಟ್ಟಸ್ವಾಮಯ್ಯ ಅವರು ಮನೆಗೆ ಬೀಗ ಹಾಕಿ ರೇಷ್ಮೆ ಸೊಪ್ಪು ತರಲು ಹೊಲಕ್ಕೆ ತೆರಳಿದ್ದರು. ಈ ಸಂದರ್ಭ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮನೆಯ ಛಾವಣಿಯ ಜೊತೆಗೆ 50 ಸಾವಿರ ನಗದು, ಟಿ.ವಿ. ಫ್ರಿಜ್, ಕಾಗದ ಪತ್ರಗಳೂ ಬೆಂಕಿಯಿಂದಾಗಿ ಸುಟ್ಟುಹೋಗಿವೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಅದನ್ನು ನಂದಿಸಲು ಅಕ್ಕಪಕ್ಕದ ಮನೆಯವರು ಮುಂದಾಗಿದ್ದು ಫಲ ನೀಡಲಿಲ್ಲ.