ಚನ್ನಪಟ್ಟಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ. ರಾಮರಾಜನ್ ಮಾತನಾಡಿ ‘ ಜನರ ಹುಟ್ಟಿನಿಂದಲೇ ಜನಪದವೂ ಹುಟ್ಟಿ ಬೆಳೆಯುತ್ತಾ ಬಂದಿದೆ. ಕಾಲ ಕಳೆದಂತೆ ಅದರ ಸ್ವರೂಪ ಬದಲಾಗಿದೆ ಅಷ್ಟೇ. ಪ್ರತಿ ಹಳ್ಳಿ, ನಗರ, ಜಿಲ್ಲೆ, ರಾಜ್ಯಕ್ಕೆ ಒಂದೊಂದು ವಿಶೇಷ ಕಲೆಗಳು ಹುಟ್ಟಿಕೊಂಡಿವೆ. ನಾನೂ ಒಬ್ಬ ಕಲಾವಿದನ ಮಗವಾಗಿ ಕಲಾವಿದರಿಗೆ ಕಲೆಗೆ ನನ್ನಿಂದ ಆಗುವ ಸಹಾಯ ಮಾಡುವೆ’ ಎಂದರು.