ಚನ್ನಪಟ್ಟಣ: ಇಲ್ಲಿನ ಹೊಂಗನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸೇವಾ ಸಂಘದ ವತಿಯಿಂದ ಮೇ 27ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಹೃದಯ, ದಂತ, ಮಧುಮೇಹ, ನರರೋಗ, ಕಿವಿ, ಮೂಗು, ಗಂಟಲು, ಮಕ್ಕಳ ಸಮಸ್ಯೆ ಸಂಬಂಧಿ ವೈದ್ಯರು, ಮೂತ್ರಪಿಂಡ, ಸ್ತ್ರೀರೋಗ ತಜ್ಞರು, ಕಣ್ಣಿನ ಸಮಸ್ಯೆ ತಜ್ಞರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಎಲ್ಲ ಸಮಸ್ಯೆಗಳಿಗೂ ಉಚಿತವಾಗಿ ಪರೀಕ್ಷೆ ನಡೆಸಿ ಔಷಧಿ ವಿತರಿಸಲಾಗುವುದು. ಕಣ್ಣಿನ ಸಮಸ್ಯೆ ಇರುವವರಿಗೆ ಕನ್ನಡಕಗಳನ್ನುಉಚಿತವಾಗಿ ವಿತರಿಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸೇವಾ ಸಂಘದ ಸಂಚಾಲಕ ಸಿ.ರಾಜು ತಿಳಿಸಿದ್ದಾರೆ.