ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾಭರಣ, ನಗದು ಕಳವು

Last Updated 1 ಸೆಪ್ಟೆಂಬರ್ 2019, 16:35 IST
ಅಕ್ಷರ ಗಾತ್ರ

ಮರಳವಾಡಿ (ಕನಕಪುರ): ಮನೆಯ ಬೀಗ ಒಡೆದು ನಗದು ಮತ್ತು ಚಿನ್ನಾಭರಣವನ್ನು ದೋಚಿದ ಘಟನೆ ತಾಲ್ಲೂಕಿನ ಮರಳವಾಡಿ ಹೋಬಳಿ ಬಳಗೆರೆ ಗ್ರಾಮದಲ್ಲಿ ನಡೆದಿದೆ.

ಬಳಗೆರೆ ಗ್ರಾಮದ ರೈತ ಭದ್ರಗಿರಿಗೌಡರ ಮಗ ಚೂಡೇಗೌಡ ಎಂಬುವರ ಮನೆಯಲ್ಲಿ 72 ಗ್ರಾಂ ಚಿನ್ನಾಭರಣ, 400 ಗ್ರಾಂ ಬೆಳ್ಳಿ, 37 ಸಾವಿರ ನಗದು ಕಳ್ಳತನವಾಗಿವೆ.

ಮನೆಯ ಮಾಲಿಕ ಚೂಡೇಗೌಡ ಅವರು ತಾವು ಬೆಳೆದಿದ್ದ ರೇಷ್ಮೆಗೂಡನ್ನು ಕನಕಪುರ ಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋಗಿದ್ದರು. ಅವರ ಪತ್ನಿ ಸೌಮ್ಯ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಕಳ್ಳತನವಾಗಿರುವ ಸಂಬಂಧ ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ಚೂಡೇಗೌಡ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT