ಕನಕಪುರ: ತಾಲ್ಲೂಕಿನಾದ್ಯಂತ ಭಾನುವಾರ ಮಧ್ಯಾಹ್ನ ಉತ್ತಮ ಮಳೆ ಸುರಿಯಿತು. ಎರಡು ಮೂರು ದಿನಗಳಿಂದ ಮಳೆ ಬರುವ ವಾತಾವರಣ ಇದ್ದರೂ ತುಂತುರು ಮಳೆಗೆ ಸೀಮಿತವಾಗಿತ್ತು. ಭಾನುವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಬಿರುಸಿನ ಮಳೆ ಸುರಿಯುತು.
ಉತ್ತಮ ಮಳೆ ಸುರಿಯುತ್ತಿರುವುದರಿಂದ ಎಳ್ಳು ಬಿತ್ತನೆಗೆ ಸಕಾಲವಾಗಿದೆ. ರೈತರು ಖುಷಿಗೊಂಡಿದ್ದಾರೆ.