<p><strong>ಬಿಡದಿ</strong>: ‘ನಮ್ಮ ಪೂರ್ವಜರಿಂದ ನಮ್ಮ ಕಾಲದವರೆಗೆ ಎಲ್ಲರೂ ಭೂಮಿ ನೆಚ್ಚಿಕೊಂಡೇ ಬದುಕುತ್ತಿದ್ದೇವೆ. ಈಗ ನಮ್ಮ ಜಮೀನಿನಲ್ಲಿ ಇವರು ಟೌನ್ಶಿಪ್ ಮಾಡುತ್ತೇವೆ ಎಂದಾಕ್ಷಣ ಬಿಟ್ಟು ಕೊಡಲು ಸಾಧ್ಯವಿಲ್ಲ. ಈ ಭೂಮಿ ಜೊತೆಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಕಡೆವರೆಗೂ ನಮ್ಮ ಭೂಮಿ ಉಳಿಸಿಕೊಳ್ಳಲು ಹೋರಾಡುತ್ತೇವೆ’ ಎಂದು ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ ಹೇಳಿದರು.</p>.<p>ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲೆ ಎತ್ತಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ವಿರೋಧಿಸಿ ಭೈರಮಂಗಲದ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ನಮ್ಮ ಭೂಮಿಯನ್ನು ನಾವು ಉಳಿಸಿಕೊಳ್ಳಲು ಬೀದಿಗೆ ಬಂದು ಹೋರಾಟ ಮಾಡಬೇಕಾದ ಸನ್ನಿವೇಶ ಬಂದಿದೆ. ನಮ್ಮ ಈ ಹೋರಾಟಕ್ಕೆ ಆರಂಭದಿಂದಲೂ ಎಲ್ಲರೂ ಬೆಂಬಲಿಸುತ್ತಾ ಬಲ ತುಂಬಿದ್ದಾರೆ. ಅದರ ಫಲವಾಗಿ ನಮ್ಮ ಹೋರಾಟ ವರ್ಷ ಪೂರೈಸಿದೆ. ಮುಂದೆಯೂ ಇದೇ ಛಲದೊಂದಿಗೆ ಹೋರಾಟ ಮುಂದುವರಿಸೋಣ. ಸರ್ಕಾರ ಇನ್ನಾದರೂ ನಮ್ಮ ಹೋರಾಟಕ್ಕೆ ಸ್ಪಂದಿಸಿ ಯೋಜನೆ ಕೈ ಬಿಡಬೇಕು’ ಎಂದು ಆಗ್ರಹಿಸಿದರು.</p>.<p>ಸಂಘದ ಖಜಾಂಚಿ ಮಂಡಲಹಳ್ಳಿ ನಾಗರಾಜು ಮಾತನಾಡಿ, ‘ನಮ್ಮ ಹೋರಾಟಕ್ಕೆ ರೈತ ಸಂಘ, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು, ಎರಡೂ ಪಕ್ಷಗಳ ನಾಯಕರಾದ ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಬೆಂಬಲಿಸಿದ್ದಾರೆ. ಭೈರಮಂಗಲಕ್ಕೆ ಬಂದು ನೈತಿಕ ಬಲ ತುಂಬಿದ್ದಾರೆ. ಅವರ ಬೆಂಬಲಕ್ಕೆ ಸಂಘವು ಆಭಾರಿಯಾಗಿರುತ್ತದೆ’ ಎಂದು ಹೇಳಿದರು.</p>.<p>ರೈತ ಸಂಘದ ಉಪಾಧ್ಯಕ್ಷ ಕೆ. ಮಲ್ಲಯ್ಯ, ‘ಕೃಷಿ ಮತ್ತು ರೈತ ಈ ದೇಶದ ಬೆನ್ನೆಲುಬು. ಆದರೆ, ಅದಕ್ಕೆ ಮೂಲವಾದ ಕೃಷಿ ಭೂಮಿಯನ್ನೇ ಆಳುವ ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿವೆ. ಫಲವತ್ತಾದ ಭೂ ಪ್ರದೇಶದಲ್ಲಿ ಟೌನ್ಶಿಪ್ ನಿರ್ಮಿಸುವ ಬದಲು, ಬೇರೆ ಕಡೆ ನಿರ್ಮಿಸಬೇಕು. ರೈತರ ಜಮೀನುಗಳಲ್ಲಿ ಕಾಂಕ್ರೀಟ್ ಕಾಡು ಬೆಳೆಯುತ್ತಾ ಹೋದರೆ, ಮುಂದೊಂದು ದಿನ ತಿನ್ನುವುದಕ್ಕೆ ಅನ್ನ ಸಿಗದ ಗತಿ ಬರುತ್ತದೆ’ ಎಂದರು.</p>.<p>ಸಭೆಯಲ್ಲಿ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪನಮನ ಸಲ್ಲಿಸಿದರು. ರೈತ ಸಂಘದ ಯುವ ಘಟಕದ ಸಂಚಾಲಕ ಚೀಲೂರು ಮುನಿರಾಜು, ಕೃಷ್ಣಯ್ಯ, ಚಂದ್ರಶೇಖರ್, ಸಂಘದ ಪ್ರಕಾಶ್, ಶ್ರೀನಿವಾಸ್ ರೆಡ್ಡಿ, ಭಾಗ್ಯಮ್ಮ, ಸುಧಾ, ಚೈತ್ರಾ, ಆನಂದ್, ರೇವಣ್ಣ, ಮಂಜಣ್ಣ, ರಾಧಕೃಷ್ಣ ಅಶ್ವಥ್, ಜಯಮ್ಮ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ</strong>: ‘ನಮ್ಮ ಪೂರ್ವಜರಿಂದ ನಮ್ಮ ಕಾಲದವರೆಗೆ ಎಲ್ಲರೂ ಭೂಮಿ ನೆಚ್ಚಿಕೊಂಡೇ ಬದುಕುತ್ತಿದ್ದೇವೆ. ಈಗ ನಮ್ಮ ಜಮೀನಿನಲ್ಲಿ ಇವರು ಟೌನ್ಶಿಪ್ ಮಾಡುತ್ತೇವೆ ಎಂದಾಕ್ಷಣ ಬಿಟ್ಟು ಕೊಡಲು ಸಾಧ್ಯವಿಲ್ಲ. ಈ ಭೂಮಿ ಜೊತೆಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಕಡೆವರೆಗೂ ನಮ್ಮ ಭೂಮಿ ಉಳಿಸಿಕೊಳ್ಳಲು ಹೋರಾಡುತ್ತೇವೆ’ ಎಂದು ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ ಹೇಳಿದರು.</p>.<p>ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲೆ ಎತ್ತಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ವಿರೋಧಿಸಿ ಭೈರಮಂಗಲದ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ನಮ್ಮ ಭೂಮಿಯನ್ನು ನಾವು ಉಳಿಸಿಕೊಳ್ಳಲು ಬೀದಿಗೆ ಬಂದು ಹೋರಾಟ ಮಾಡಬೇಕಾದ ಸನ್ನಿವೇಶ ಬಂದಿದೆ. ನಮ್ಮ ಈ ಹೋರಾಟಕ್ಕೆ ಆರಂಭದಿಂದಲೂ ಎಲ್ಲರೂ ಬೆಂಬಲಿಸುತ್ತಾ ಬಲ ತುಂಬಿದ್ದಾರೆ. ಅದರ ಫಲವಾಗಿ ನಮ್ಮ ಹೋರಾಟ ವರ್ಷ ಪೂರೈಸಿದೆ. ಮುಂದೆಯೂ ಇದೇ ಛಲದೊಂದಿಗೆ ಹೋರಾಟ ಮುಂದುವರಿಸೋಣ. ಸರ್ಕಾರ ಇನ್ನಾದರೂ ನಮ್ಮ ಹೋರಾಟಕ್ಕೆ ಸ್ಪಂದಿಸಿ ಯೋಜನೆ ಕೈ ಬಿಡಬೇಕು’ ಎಂದು ಆಗ್ರಹಿಸಿದರು.</p>.<p>ಸಂಘದ ಖಜಾಂಚಿ ಮಂಡಲಹಳ್ಳಿ ನಾಗರಾಜು ಮಾತನಾಡಿ, ‘ನಮ್ಮ ಹೋರಾಟಕ್ಕೆ ರೈತ ಸಂಘ, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು, ಎರಡೂ ಪಕ್ಷಗಳ ನಾಯಕರಾದ ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಬೆಂಬಲಿಸಿದ್ದಾರೆ. ಭೈರಮಂಗಲಕ್ಕೆ ಬಂದು ನೈತಿಕ ಬಲ ತುಂಬಿದ್ದಾರೆ. ಅವರ ಬೆಂಬಲಕ್ಕೆ ಸಂಘವು ಆಭಾರಿಯಾಗಿರುತ್ತದೆ’ ಎಂದು ಹೇಳಿದರು.</p>.<p>ರೈತ ಸಂಘದ ಉಪಾಧ್ಯಕ್ಷ ಕೆ. ಮಲ್ಲಯ್ಯ, ‘ಕೃಷಿ ಮತ್ತು ರೈತ ಈ ದೇಶದ ಬೆನ್ನೆಲುಬು. ಆದರೆ, ಅದಕ್ಕೆ ಮೂಲವಾದ ಕೃಷಿ ಭೂಮಿಯನ್ನೇ ಆಳುವ ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿವೆ. ಫಲವತ್ತಾದ ಭೂ ಪ್ರದೇಶದಲ್ಲಿ ಟೌನ್ಶಿಪ್ ನಿರ್ಮಿಸುವ ಬದಲು, ಬೇರೆ ಕಡೆ ನಿರ್ಮಿಸಬೇಕು. ರೈತರ ಜಮೀನುಗಳಲ್ಲಿ ಕಾಂಕ್ರೀಟ್ ಕಾಡು ಬೆಳೆಯುತ್ತಾ ಹೋದರೆ, ಮುಂದೊಂದು ದಿನ ತಿನ್ನುವುದಕ್ಕೆ ಅನ್ನ ಸಿಗದ ಗತಿ ಬರುತ್ತದೆ’ ಎಂದರು.</p>.<p>ಸಭೆಯಲ್ಲಿ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪನಮನ ಸಲ್ಲಿಸಿದರು. ರೈತ ಸಂಘದ ಯುವ ಘಟಕದ ಸಂಚಾಲಕ ಚೀಲೂರು ಮುನಿರಾಜು, ಕೃಷ್ಣಯ್ಯ, ಚಂದ್ರಶೇಖರ್, ಸಂಘದ ಪ್ರಕಾಶ್, ಶ್ರೀನಿವಾಸ್ ರೆಡ್ಡಿ, ಭಾಗ್ಯಮ್ಮ, ಸುಧಾ, ಚೈತ್ರಾ, ಆನಂದ್, ರೇವಣ್ಣ, ಮಂಜಣ್ಣ, ರಾಧಕೃಷ್ಣ ಅಶ್ವಥ್, ಜಯಮ್ಮ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>