ಇದಕ್ಕೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿ, ‘ದಿಶಾ ಸಮಿತಿ ಸಭೆ ನಡೆಸಲು ಮಾತ್ರ ಸಂಸದರಿಗೆ ಅವಕಾಶ ಇದೆ. ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿಯನ್ನು ಅವರು ಪರಿಶೀಲಿಸಬಹುದು. ಅದನ್ನು ಹೊರತುಪಡಿಸಿ ಪ್ರತ್ಯೇಕವಾಗಿ ಸಭೆ ನಡೆಸಲು ಅವಕಾಶ ಇಲ್ಲ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಕೆಡಿಪಿ ಸಭೆಗಳನ್ನು ಮಾಡಬಹುದು. ಮಂತ್ರಿಗಳೂ ತಮ್ಮ ಇಲಾಖೆ ಹೊರತುಪಡಿಸಿ ಉಳಿದಇಲಾಖೆಗಳ ಬಗ್ಗೆ ಮಾತನಾಡಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ಹೇಳಿದರು.