ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಯಸಂದ್ರ ರವಿ ಮಾತನಾಡಿ, ’ಯುವಕರು ಜವಾಬ್ದಾರಿ ಮರೆತು ಹೆಚ್ಚಾಗಿ ಮೊಬೈಲ್ನಲ್ಲಿ ಮುಳುಗಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಹೆಚ್ಚಿನ ಸಮಯ ಕಳೆಯುವುದರ ಬದಲು ಇಂತಹ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕ್ರೀಡೆಗಳು ಯುವಕರಲ್ಲಿ ಸ್ಪರ್ಧಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಹುಟ್ಟಿಹಾಕುತ್ತವೆ’ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ರತ್ನಮ್ಮ ಸಿದ್ದರಾಜು, ಚಿಕ್ಕಕಲ್ಬಾಳ್ ವಿಎಸ್ಎಸ್ಎನ್ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪುಟ್ಟಸ್ವಾಮಿ, ಪಂಚಾಯಿತಿ ಸದಸ್ಯ ಶಂಭುಲಿಂಗೇಗೌಡ, ಹಾಲಿನ ಡೇರಿ ಅಧ್ಯಕ್ಷ ನಂಜುಂಡಸ್ವಾಮಿ, ಮುಖಂಡ ನಾಗೇಶ್, ಚಿಕ್ಕಕಲ್ಬಾಳ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ರಾಜಣ್ಣಗೌಡ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ತಿಪ್ಪಣ್ಣ, ಶ್ರೀಬಸವೇಶ್ವರ ಗೆಳೆಯರ ಬಳಗದವರು ಇದ್ದರು.
ದೈಹಿಕ ಶಿಕ್ಷಕರಾದ ಕೃಷ್ಣಪ್ಪ, ಕೆ.ಟಿ.ಸುರೇಶ್, ಸಂಜು ಎಡಮಲೆ, ಎಸ್.ವೈ.ಸುರೇಶ್ ಪಂದ್ಯ ನಡೆಸಿಕೊಟ್ಟರು. ಚಿಕ್ಕಕಲ್ಬಾಳ್ ನ ಸಿ.ಕೆ.ಬಿ ಲಯನ್ಸ್, ಯಂಗ್ಸ್ಟಾರ್, ಯಂಗ್ ಟೈಗರ್ಸ್, ಯುವ ಪ್ರತಿಭೆ, ದೊಡ್ಡಾಲಹಳ್ಳಿ ಕಾಲೇಜು, ಕನಕಪುರ ರೂರಲ್ ಪದವಿ ಕಾಲೇಜು ಮತ್ತು ಪದವಿಪೂರ್ವ ಕಾಲೇಜು, ಮುದುವಾಡಿ ಕಾಲೇಜು ಸೇರಿದಂತೆ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು.