ರಾಮನಗರ: ಕನಕಪುರ ನಗರದ ಹೊರವಲಯದಲ್ಲಿರುವ ಎಸ್.ಬಿ. ಕಲ್ಯಾಣ ಮಂಟಪದ ಹಿಂಭಾಗ ಶನಿವಾರ ಬೆಳಿಗ್ಗೆ ಹೆಲಿಕಾಪ್ಟರ್ ಒಂದು ತುರ್ತು ಭೂ ಸ್ಪರ್ಶ ಮಾಡಿತು.
ಬೆಳಿಗ್ಗೆ 9ರ ಸುಮಾರಿಗೆ ಹೆಲಿಕಾಪ್ಟರ್ ಕಲ್ಯಾಣ ಮಂಟಪದ ಹಿಂಭಾಗದ ಮೈದಾನದಲ್ಲಿ ಇಳಿಯಿತು. ಅದರಲ್ಲಿ ಇಬ್ಬರು ಪೈಲಟ್ ಗಳು ಇದ್ದು, ಕೆಲವೊಂದು ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಿಕೊಂಡು ಮತ್ತೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಹೆಲಿಕಾಪ್ಟರ್ ಯಾವ ಸಂಸ್ಥೆಗೆ ಸೇರಿದ್ದೆಂಬ ವಿವರಗಳು ಲಭ್ಯವಾಗಿಲ್ಲ. ಅದನ್ನು ನೋಡುವ ಸಲುವಾಗಿ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದರು.