"ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಿ ಜಾಗವನ್ನು ಯಾವುದೇ ಮತೀಯ ಸಂಘಟನೆಗಳಿಗೆ ನೀಡಬಾರದು. ಆದರೆ ಡಿ.ಕೆ. ಸಹೋದರರು ನಿಯಮಗಳನ್ನು ಗಾಳಿಗೆ ತೂರಿ, ತಮ್ಮ ಬೆಂಬಲಿಗರನ್ನು ಒಳಗೊಂಡಂತೆ ಟ್ರಸ್ಟ್ ರಚನೆ ಮಾಡಿದ್ದಾರೆ. ಅಲ್ಲದೆ, ಬೆಟ್ಟದಲ್ಲಿ ಕಾನೂನು ಬಾಹಿರವಾಗಿ ರಸ್ತೆ ನಿರ್ಮಾಣ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಹೇಳಿದರು.