ಇದೀಗ ಮತ್ತೆ ಅದೇ ಜಾಗದಲ್ಲಿ ಹಂಪ್ಸ್ ನಿರ್ಮಾಣ ಆಗಿವೆ. ಈ ಬಾರಿ ಇವುಗಳಿಗೆ ಮಾರ್ಕಿಂಗ್ ಮಾಡಿ ಅಧಿಕಾರಿಗಳು ಕೊಂಚ ಜಾಣ್ಮೆ ತೋರಿದ್ದಾರೆ. ಇದಕ್ಕಿಂದಲೂ ಹೆಚ್ಚಾಗಿ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಅವರ ಮನೆಯ ಸಮೀಪ ಹಂಪ್ಸ್ ಹಾಕಿರುವುದಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಅದು ಜನನಿಬಿಡ ಪ್ರದೇಶವೂ ಅಲ್ಲ, ಅಪಘಾತ ವಲಯವೂ ಅಲ್ಲ. ಹೀಗಿದ್ದೂ ರಸ್ತೆ ಉಬ್ಬು ನಿರ್ಮಾಣ ಮಾಡಿರುವುದು ಏಕೆ ಎಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ.