‘ಅಂಬೇಡ್ಕರ್ ಅವರು ಶೋಷಿತ ಸಮುದಾಯದಲ್ಲಿ ಜನಿಸಿ, ಉನ್ನತ ಶಿಕ್ಷಣ ಪಡೆದು ಶೋಷಿತ ಸಮದಾಯದ ಉದ್ಧಾರಕ್ಕಾಗಿ ದುಡಿದವರು. ಸಂವಿಧಾನ ರಚನೆ ಮಾಡಿ ಶೋಷಿತರ ಬಾಳಿಗೆ ಬೆಳಕಾದವರು. ಸಮಾಜವು ಶಿಕ್ಷಣ ಹಾಗೂ ಪ್ರತಿಭೆಗಳಿಗೆ ಮಾತ್ರ ಬೆಲೆ ಕೊಡುತ್ತದೆ ಎಂದು ಅರಿತಿದ್ದ ಅಂಬೇಡ್ಕರ್ ಅವರ ತತ್ವ, ಆದರ್ಶ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕು’ ಎಂದರು.