ನಗರದ ಹಳೆ ಸೇತುವೆಯ ಪಶ್ಚಿಮ ಭಾಗದಲ್ಲಿ ಷರೀಪ್ ಕಾಂಪ್ಲಕ್ಸ್ ಪಕ್ಕದಲ್ಲಿ ಅರ್ಕಾವತಿ ನದಿಗೆ ಇಳಿಯುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಗಡಿಯಾರದ ಅಂಗಡಿ ಮಾಲೀಕರೊಬ್ಬರು ಶೆಡ್ ನಿರ್ಮಿಸಿಕೊಳ್ಳಲು ಆರಂಭಿಸಿದ್ದರು. ಇದನ್ನು ಗಮನಿಸಿದ ನಗರ ಸಭೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ (ಇ.ಇ) ರಾಜೇಗೌಡ ಅವರು ಒತ್ತುವರಿ ಮಾಡುವುದು, ಶೆಡ್ ನಿರ್ಮಿಸಿಕೊಳ್ಳುವುದು ಅಕ್ರಮ ಎಂದು ಎಚ್ಚರಿಸಿದ್ದರು.