ಪೂರ್ವಿಕರು ಕೊಟ್ಟಿಗೆ ಗೊಬ್ಬರ ಮತ್ತು ಕುರಿ ಮೇಕೆ ಗೊಬ್ಬರವನ್ನು ಭೂಮಿಗೆ ಹಾಕಿ ಬೆಳೆಗಳನ್ನು ಬೆಳೆಯುತ್ತಿದ್ದರು. ಬೆರಕೆ ಸೊಪ್ಪು, ರಾಗಿ, ಜೋಳ ತಿಂದು ನೂರಾರು ವರ್ಷಗಳ ಕಾಲ ಆರೋಗ್ಯಪೂರ್ಣ ಬದುಕು ಸಾಗಿಸಿ, ಕೂಡುಕುಟುಂಬದಲ್ಲಿ ನೆಮ್ಮದಿಯ ಜೀವನ ನಡೆಸಿದ್ದರು. ರಸಗೊಬ್ಬರ ಬಳಸುತ್ತಿರುವುದು ದೇಹಾರೋಗ್ಯ ನಶಿಸಲು ಮುಖ್ಯ ಕಾರಣವಾಗಿದೆ. ಬೇಕರಿ ತಿನಿಸು ಮಕ್ಕಳಿಗೆ ಕೊಡಬೇಡಿ. ಬೆರಕೆ ಸೊಪ್ಪು, ಮೇಕೆ ಹಾಲು ಬಳಸಿ ದೇಹಾರೋಗ್ಯ ಸುಧಾರಿಸಿಕೊಳ್ಳಲು ಮುಂದಾಗಬೇಕು ಎಂದರು.