ತಿಪ್ಪಸಂದ್ರ(ಮಾಗಡಿ): ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಿರಿಗ್ರಾಮೋದ್ಯೋಗ ಸಂಸ್ಥೆ ಆರಂಭಿಸಿ, ದೇಸಿ ನಿತ್ಯಬಳಕೆಯ= ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಯೋಜನಾಧಿಕಾರಿ ಶಶಿಕಲಾ ಸುವರ್ಣ ತಿಳಿಸಿದರು.
ತಿಪ್ಪಸಂದ್ರ ಗ್ರಾಮದಲ್ಲಿ ‘ಸಿರಿಮಾರಾಟ ಮಳಿಗೆ’ ಆರಂಭಿಸಿ ಅವರು ಮಾತನಾಡಿದರು. ಸಂಸ್ಥೆ ವತಿಯಿಂದ ಆರಂಭವಾಗಿರುವ ಮಳಿಗೆಯಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು ತಯಾರಿಸಿರುವ ಪರಿಶುದ್ಧ ಗುಣಮಟ್ಟದ ನಿತ್ಯ ಬಳಕೆ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ಇದರಿಂದ ಬಂದ ಹಣವನ್ನು ಮಹಿಳೆಯರ ಸಬಲೀಕರಣಕ್ಕೆ ಬಳಸಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರಘು, ಸ್ತ್ರೀಶಕ್ತಿ ಸಂಘದ ಮೀನಾಕ್ಷಿ, ಗಾಯಿತ್ರಮ್ಮ, ಮೇಲ್ವಿಚಾರಕ ಜಯಣ್ಣ, ಸುರೇಶ್, ಮೆಡಿಕಲ್ಸ್ ಮೂರ್ತಿ ಇದ್ದರು.