ಜನ ಸೇರುವುದೆ ಜನಪದ. ಒಬ್ಬರನ್ನೊಬ್ಬರು ಅಗಲುವುದೇ ಆಧುನಿಕತೆ. ಕೂಡುವಿಕೆ, ಸೇರುವಿಕೆ, ಒಂದಾಗುವಿಕೆ, ಏಕತೆ ಜನಪದದ ಮೂಲ ಆಶಯ. ದ್ವೇಷ, ಸಿಟ್ಟು ಮಾಡಿಕೊಳ್ಳುವವರ ಬಳಿ ಕಲೆ ಇರುವುದಿಲ್ಲ. ಹಸಿವನ್ನು ಮೀರಿದ ನಗು ಜನಪದದಲ್ಲಿದೆ. ಜನಪದ ಕಲೆ ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರು ಆರೋಗ್ಯವಾಗಿರುತ್ತಾರೆ. ಎಲ್ಲ ಕಾಲಕ್ಕೂ ಜಾನಪದ ಕಲೆಗೆ ಬೆಲೆ ಇದೆ, ಸಾವಿಲ್ಲ ಎಂದು ತಿಳಿಸಿದರು.