’ಯೋಗೇಶ್ವರ್ ಹಿಂದಿನ ಚುನಾವಣೆಯಲ್ಲಿ ಜನರಿಂದ ತಿರಸ್ಕತರಾಗಿದ್ದಾರೆ. ಇದೀಗ ಅತ್ತೂ ಕರೆದು ಪರಿಷತ್ ಸ್ಥಾನ ಪಡೆದು ಎರಡು ವರ್ಷದ ನಂತರ ತಾಲ್ಲೂಕಿಗೆ ಬಂದಿದ್ದಾರೆ. ಎಚ್.ಡಿ ಕುಮಾರಸ್ವಾಮಿ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. 20 ವರ್ಷ ಅಧಿಕಾರ ಅನುಭವಿಸಿದವರು ಸೋತ ನಂತರ ತಾಲ್ಲೂಕಿನ ಜನರ ಕಷ್ಟ ಕೇಳಲಿಲ್ಲ. ಅಧಿಕಾರವಿದ್ದರೆ ಮಾತ್ರ ಜನಸೇವೆಯೇ ? ಎರಡು ವರ್ಷ ವನವಾಸ, ಅಜ್ಞಾತವಾಸದಲ್ಲಿದ್ದೆ ಎಂದಿದ್ದಾರೆ. ಹಾಗಾದರೆ ಯೋಗೇಶ್ವರ್ ಯಾವ ಕಾಡಿಗೆ ಹೋಗಿದ್ದರು‘ ಎಂದು ಲೇವಡಿ ಮಾಡಿದರು.