ಯಾರಿಗೆ ವರದಿ ಕೊಟ್ಟಿದ್ದರು?: ಜಾತಿಗಣತಿ ವರದಿಯನ್ನು ಕುಮಾರಸ್ವಾಮಿ ಸ್ವೀಕಾರ ಮಾಡಿಲ್ಲ ಎಂಬ ಸಿದ್ದರಾಮಯ್ಯರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಎಚ್ಡಿಕೆ ‘ನನ್ನ ಹತ್ತಿರ ಯಾರೂ ವರದಿ ಕೊಟ್ಟಿಲ್ಲ. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಅವರೇ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಜನಗಣತಿ ವರದಿ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದರ? ನನ್ನ ಬಳಿ ವರದಿ ಇದೆ ತೆಗೆದುಕೊಳ್ಳಿ ಅಂದ ಬಂದಿದ್ರಾ?’ ಎಂದು ಮರು ಪ್ರಶ್ನಿಸಿದರು.