ಇದೇ 14ರಿಂದ 17ರವರೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸಭೆಗಳು ನಡೆಯಲಿವೆ. ಎಚ್ಡಿಕೆ ಜೊತೆಗೆ ಶಾಸಕರಾದ ಅನಿತಾ ಹಾಗೂ ಮಂಜುನಾಥ್ ಸಹ ಈ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 14ರಂದು ಬೆಳಿಗ್ಗೆ 11ಕ್ಕೆ ಕೈಲಾಂಚ ಹೋಬಳಿಯ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಯಲಿದೆ. 15ರಂದು ಕಸಬಾ ಹೋಬಳಿ ಮತ್ತು ರಾಮನಗರ ಟೌನ್ ಮಟ್ಟದ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. 16ರಂದು ಬೆಳಿಗ್ಗೆ 11ಕ್ಕೆ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯ ಕಾರ್ಯಕರ್ತರ ಸಭೆ ಜರುಗಲಿದೆ. 17ರಂದು ಬೆಳಗ್ಗೆ 11ಕ್ಕೆ ಎಚ್ಡಿಕೆ ಕೂಟಗಲ್ ಹಾಗೂ ಬಿಡದಿ ಹೋಬಳಿಯ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ.