ಕಲಬುರ್ಗಿ ಪಾಲಿಕೆಯು ಸದ್ಯ ಅತಂತ್ರವಾಗಿದ್ದು, ಅಧಿಕಾರ ಹಿಡಿಯುವಲ್ಲಿ ಜೆಡಿಎಸ್ ಪಾತ್ರ ನಿರ್ಣಾಯಕವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ಅಧಿಕಾರಕ್ಕಾಗಿ ಕಸರತ್ತು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸೂಚನೆ ಮೇರೆಗೆ ಜೆಡಿಎಸ್ನ ಸದಸ್ಯರಾದ ಕೃಷ್ಣಾರೆಡ್ಡಿ, ನಾಸಿರ್, ಅಲಿಮುದ್ದೀನ್ ಪಟೇಲ್ ಹಾಗೂ ಸಾಜಿತ್ ಕಲ್ಯಾಣಿ ಎಂಬುವರು ಬಿಡದಿಗೆ ಧಾವಿಸಿದ್ದಾರೆ.