<p>ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಬಿಜ್ಜಳ್ಳಿ ಗ್ರಾಮದಲ್ಲಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ವತಿಯಿಂದ ಮುಂಗಾರು ಉತ್ಸವ ಸೋಮವಾರ ನಡೆಯಿತು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಜಾನಪದ ಕಲಾವಿದ ಚಿಕ್ಕಮರೀಗೌಡ, ‘ಗ್ರಾಮೀಣ ಭಾಗದ ರೈತರು, ರೈತ ಮಹಿಳೆಯರು ನಾಟಿ ಮಾಡುವಾಗ, ಬಿತ್ತನೆ, ಕಟಾವು, ಒಕ್ಕಣೆ ಮಾಡುವಾಗ, ರಾಗಿ ಬೀಸುವಾಗ ಗೀತೆಗಳನ್ನು ಹಾಡಿ ಜನಪದ ಬೆಳೆಸಿದ್ದಾರೆ’ ಎಂದು ಸ್ಮರಿಸಿದರು.</p>.<p>ದಿವ್ಯ ಫೌಂಡೇಶನ್ನ ಸುರೇಶ್, ‘ಜನಪದ ಸಾಹಿತ್ಯವು ಹಳ್ಳಿಗಾಡಿನ ಮುಗ್ಧ ಜನರಿಂದ, ಮಹಿಳೆಯರಿಂದ ಹುಟ್ಟಿ, ಬೆಳೆದು ಬಂದಿದೆ. ಇಂತಹ ಸಂಸ್ಕೃತಿಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.</p>.<p>ಪ್ರಮುಖರಾದ ದಿಲೀಪ್, ವೀರಭದ್ರೇಗೌಡ, ಕೆಂಪಲಿಂಗಯ್ಯ, ನಾಗರಾಜು, ರಾಜಣ್ಣ ಮಾತನಾಡಿ, ‘ಗ್ರಾಮೀಣ ಸಂಸ್ಕೃತಿ, ಆಚರಣೆಗಳು ಕಣ್ಮರೆಯಾಗುತ್ತಿವೆ. ಇಂತಹ ಆಚರಣೆ, ಉತ್ಸವಗಳು ಗ್ರಾಮೀಣ ಸಂಸ್ಕೃತಿ ನೆನಪಿಸುತ್ತವೆ’ ಎಂದು ಹೇಳಿದರು.</p>.<p>ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಕೆ.ಕಾಳಯ್ಯ, ಗಾಯಕರಾದ ಕೆ.ಶಿವರಾಂ, ಮುನಿರಾಜು, ರಮೇಶ್.ಎ.ಆರ್, ಶ್ರೀನಿವಾಸ್, ಚೆನ್ನಮ್ಮರಯ್ಯ, ರೇಖಾ, ವೈರಮುಡಿ, ಶಿವಕುಮಾರ್ ಉಪಸ್ಥಿತರಿದ್ದರು.</p>.<p>ಪೂಜಾ ಕುಣಿತ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ, ತಮಟೆ ವಾದನ ಹಾಗೂ ಇತರ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-14-237054818</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಬಿಜ್ಜಳ್ಳಿ ಗ್ರಾಮದಲ್ಲಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ವತಿಯಿಂದ ಮುಂಗಾರು ಉತ್ಸವ ಸೋಮವಾರ ನಡೆಯಿತು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಜಾನಪದ ಕಲಾವಿದ ಚಿಕ್ಕಮರೀಗೌಡ, ‘ಗ್ರಾಮೀಣ ಭಾಗದ ರೈತರು, ರೈತ ಮಹಿಳೆಯರು ನಾಟಿ ಮಾಡುವಾಗ, ಬಿತ್ತನೆ, ಕಟಾವು, ಒಕ್ಕಣೆ ಮಾಡುವಾಗ, ರಾಗಿ ಬೀಸುವಾಗ ಗೀತೆಗಳನ್ನು ಹಾಡಿ ಜನಪದ ಬೆಳೆಸಿದ್ದಾರೆ’ ಎಂದು ಸ್ಮರಿಸಿದರು.</p>.<p>ದಿವ್ಯ ಫೌಂಡೇಶನ್ನ ಸುರೇಶ್, ‘ಜನಪದ ಸಾಹಿತ್ಯವು ಹಳ್ಳಿಗಾಡಿನ ಮುಗ್ಧ ಜನರಿಂದ, ಮಹಿಳೆಯರಿಂದ ಹುಟ್ಟಿ, ಬೆಳೆದು ಬಂದಿದೆ. ಇಂತಹ ಸಂಸ್ಕೃತಿಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.</p>.<p>ಪ್ರಮುಖರಾದ ದಿಲೀಪ್, ವೀರಭದ್ರೇಗೌಡ, ಕೆಂಪಲಿಂಗಯ್ಯ, ನಾಗರಾಜು, ರಾಜಣ್ಣ ಮಾತನಾಡಿ, ‘ಗ್ರಾಮೀಣ ಸಂಸ್ಕೃತಿ, ಆಚರಣೆಗಳು ಕಣ್ಮರೆಯಾಗುತ್ತಿವೆ. ಇಂತಹ ಆಚರಣೆ, ಉತ್ಸವಗಳು ಗ್ರಾಮೀಣ ಸಂಸ್ಕೃತಿ ನೆನಪಿಸುತ್ತವೆ’ ಎಂದು ಹೇಳಿದರು.</p>.<p>ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಕೆ.ಕಾಳಯ್ಯ, ಗಾಯಕರಾದ ಕೆ.ಶಿವರಾಂ, ಮುನಿರಾಜು, ರಮೇಶ್.ಎ.ಆರ್, ಶ್ರೀನಿವಾಸ್, ಚೆನ್ನಮ್ಮರಯ್ಯ, ರೇಖಾ, ವೈರಮುಡಿ, ಶಿವಕುಮಾರ್ ಉಪಸ್ಥಿತರಿದ್ದರು.</p>.<p>ಪೂಜಾ ಕುಣಿತ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ, ತಮಟೆ ವಾದನ ಹಾಗೂ ಇತರ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-14-237054818</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>