<p><strong>ಕನಕಪುರ</strong>: ಆನ್ಲೈನ್ ಔಷಧ ಮಾರಾಟ ಮತ್ತು ಅಸಹಜ ರಿಯಾಯಿತಿಯನ್ನು ಸರ್ಕಾರ ತಕ್ಷಣ ತಡೆಗಟ್ಟಬೇಕು ಎಂದು ಔಷಧ ಮಾರಾಟ ವ್ಯಾಪಾರಿಗಳು ಮತ್ತು ವಿತರಕರು ಒತ್ತಾಯಿಸಿದ್ದಾರೆ.</p>.<p>ನಗರದ ಎಂ.ಜಿ ರಸ್ತೆಯಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘ, ಕನಕಪುರ, ಹಾರೋಹಳ್ಳಿ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದರು.</p>.<p>ಮೆಡಿಕಲ್ ಸ್ಟೋರ್ ವ್ಯಾಪಾರ ಪಾರಂಪರಿಕವಾಗಿ ಬಂದಿದೆ. ಕೇವಲ ಔಷಧಿ ಮಾರಾಟವಲ್ಲದೆ ಭಾವನಾತ್ಮಕ ಸಂಬಂಧವನ್ನೂ ಹೊಂದಿದೆ. ಕೋವಿಡ್ನಂತಹ ಕಠಿಣ ಸಂದರ್ಭದಲ್ಲೂ ನಿರ್ಭಯವಾಗಿ ಮೆಡಿಕಲ್ ಸ್ಟೋರ್ಗಳನ್ನು ತೆರೆದು ಸಾಮಾಜಿಕ ಹಿತದೃಷ್ಟಿಯಿಂದ ವ್ಯಾಪಾರ ಮಾಡಲಾಗಿದೆ. ಆದರೆ, ಆನ್ಲೈನ್ ಔಷಧ ಮಾರಾಟ ಮತ್ತು ಅಸಹಜ ರಿಯಾಯಿತಿ ಈ ವೃತ್ತಿಗೆ ಮಾರಕವಾಗುತ್ತಿವೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.</p>.<p>ಸಂಘದ ಜಿಲ್ಲಾಧ್ಯಕ್ಷ ಜಿ.ಪಿ.ವೀರೇಶ್ ಮತ್ತು ತಾಲ್ಲೂಕು ಅಧ್ಯಕ್ಷ ಮೊಹಮ್ಮದ್ ಏಜಾಜ್ ಮಾತನಾಡಿ, ಕೆಲವು ನಿರ್ಬಂಧಿತ ಔಷಧ ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಬೇಕು. ಸುರಕ್ಷತೆಯಿಂದ ಕಾಪಾಡಬೇಕು. ಆದರೆ, ಆನ್ಲೈನ್ ಎಲ್ಲವೂ ಮುಕ್ತವಾಗಿ ಲಭ್ಯವಾಗುತ್ತಿದೆ. ಇದರಿಂದ ಅನಾಹುತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.</p>.<p>ಜಿಲ್ಲಾ ಸಂಘದ ಖಜಾಂಚಿ ಕೆ.ಎಸ್.ಮಹೇಶ್, ಸೌಗಂಧ ಗಣೇಶ್, ಹನುಮಂತೇಗೌಡ, ರಾಜಕುಮಾರ್, ಯಶವಂತ್, ಸೈಯದ್ ತೌಸೀಫ್, ಚಂದ್ರು, ದೀಪು, ಲೋಕೇಶ್, ಸುನಿಲ್ ರಾವ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-14-2110115400</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ಆನ್ಲೈನ್ ಔಷಧ ಮಾರಾಟ ಮತ್ತು ಅಸಹಜ ರಿಯಾಯಿತಿಯನ್ನು ಸರ್ಕಾರ ತಕ್ಷಣ ತಡೆಗಟ್ಟಬೇಕು ಎಂದು ಔಷಧ ಮಾರಾಟ ವ್ಯಾಪಾರಿಗಳು ಮತ್ತು ವಿತರಕರು ಒತ್ತಾಯಿಸಿದ್ದಾರೆ.</p>.<p>ನಗರದ ಎಂ.ಜಿ ರಸ್ತೆಯಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘ, ಕನಕಪುರ, ಹಾರೋಹಳ್ಳಿ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದರು.</p>.<p>ಮೆಡಿಕಲ್ ಸ್ಟೋರ್ ವ್ಯಾಪಾರ ಪಾರಂಪರಿಕವಾಗಿ ಬಂದಿದೆ. ಕೇವಲ ಔಷಧಿ ಮಾರಾಟವಲ್ಲದೆ ಭಾವನಾತ್ಮಕ ಸಂಬಂಧವನ್ನೂ ಹೊಂದಿದೆ. ಕೋವಿಡ್ನಂತಹ ಕಠಿಣ ಸಂದರ್ಭದಲ್ಲೂ ನಿರ್ಭಯವಾಗಿ ಮೆಡಿಕಲ್ ಸ್ಟೋರ್ಗಳನ್ನು ತೆರೆದು ಸಾಮಾಜಿಕ ಹಿತದೃಷ್ಟಿಯಿಂದ ವ್ಯಾಪಾರ ಮಾಡಲಾಗಿದೆ. ಆದರೆ, ಆನ್ಲೈನ್ ಔಷಧ ಮಾರಾಟ ಮತ್ತು ಅಸಹಜ ರಿಯಾಯಿತಿ ಈ ವೃತ್ತಿಗೆ ಮಾರಕವಾಗುತ್ತಿವೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.</p>.<p>ಸಂಘದ ಜಿಲ್ಲಾಧ್ಯಕ್ಷ ಜಿ.ಪಿ.ವೀರೇಶ್ ಮತ್ತು ತಾಲ್ಲೂಕು ಅಧ್ಯಕ್ಷ ಮೊಹಮ್ಮದ್ ಏಜಾಜ್ ಮಾತನಾಡಿ, ಕೆಲವು ನಿರ್ಬಂಧಿತ ಔಷಧ ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಬೇಕು. ಸುರಕ್ಷತೆಯಿಂದ ಕಾಪಾಡಬೇಕು. ಆದರೆ, ಆನ್ಲೈನ್ ಎಲ್ಲವೂ ಮುಕ್ತವಾಗಿ ಲಭ್ಯವಾಗುತ್ತಿದೆ. ಇದರಿಂದ ಅನಾಹುತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.</p>.<p>ಜಿಲ್ಲಾ ಸಂಘದ ಖಜಾಂಚಿ ಕೆ.ಎಸ್.ಮಹೇಶ್, ಸೌಗಂಧ ಗಣೇಶ್, ಹನುಮಂತೇಗೌಡ, ರಾಜಕುಮಾರ್, ಯಶವಂತ್, ಸೈಯದ್ ತೌಸೀಫ್, ಚಂದ್ರು, ದೀಪು, ಲೋಕೇಶ್, ಸುನಿಲ್ ರಾವ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-14-2110115400</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>