ಜಾತ್ರೆಯು ಶನಿವಾರ ಪ್ರಾರಂಭವಾಗಿದ್ದು, ರಾತ್ರಿ ಸೌದೆ ತುಂಬಿದ ಎತ್ತಿನ ಗಾಡಿಯ ಮೆರವಣಿಗೆ ನೆರವೇರಿತು ಭಾನುವಾರ ಬಸವೇಶ್ವರ ಕೊಂಡ ತೆಗೆಯಲು ಪೂಜೆ ನೆರವೇರಲಿದೆ. ಸೋಮವಾರ ಪಾನಕದ ಬಂಡಿ ಮೆರವಣಿಗೆ ನಡೆಯಲಿದೆ. ಮಂಗಳವಾರ ಬಸವೇಶ್ವರ ಸ್ವಾಮಿ ಕೊಂಡೋತ್ಸವವಿದೆ ಬುಧವಾರ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಗುರುವಾರ ಭೀಮನಕಿಂಡಿ ಬೆಟ್ಟದ ಬಸವೇಶ್ವರಸ್ವಾಮಿಗೆ ಚಿನ್ನಾಭರಣ ಧರಿಸಿ, ಸಂಜೆ ಗ್ರಾಮದಲ್ಲಿ ತೆಗೆದಿರುವ ಬಸವೇಶ್ವರ ಕೊಂಡವನ್ನು ಮುಚ್ಚಲಾಗುತ್ತದೆ.