<p><strong>ರಾಮನಗರ</strong>: ‘ಓದುವಿಕೆ ಎಂಬುದು ನಿತ್ಯ ಹರಿಯುವ ನದಿಯಂತೆ. ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲೂ ಜನರಲ್ಲಿ ಓದಿನ ಆಸಕ್ತಿ ಕುಂದಿಲ್ಲ. ಇಂದಿಗೂ ಜನಪ್ರಿಯ ಸಾಹಿತಿಗಳ ಪುಸ್ತಕಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾರಾಟವಾಗಿ ಮರು ಮುದ್ರಣ ಕಾಣುತ್ತವೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ವಿ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.</p>.<p>ನಗರದ ಬ್ಲಾಸಂ ಇಂಟರ್ನ್ಯಾಷನಲ್ ಇಂಗ್ಲಿಷ್ ಶಾಲೆ ಸಭಾಂಗಣದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಗುರುವಾರ ಹಮ್ಮಿಕೊಂಡಿದ್ದ ವಕೀಲ ಅಂಬರೀಶ ಅವರು ಸಂಪಾದಿಸಿರುವ ‘ಅರಸು ಚುಟುಕು ಚಿಲುಮೆಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜನರು ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ಪುಸ್ತಕೋದ್ಯಮವನ್ನು ಬೆಂಬಲಿಸಬೇಕು’ ಎಂದರು.</p>.<p>‘ಮಕ್ಕಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಪುಸ್ತಕಗಳ ಓದುವ ಅಭ್ಯಾಸ ಬೆಳೆಸಬೇಕು. ಇದರಲ್ಲಿ ತಂದೆ–ತಾಯಿ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು. ಉತ್ತಮ ಸಂಸ್ಕಾರವಿದ್ದಾಗ ಮಾತ್ರ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯ. ವಿದ್ಯೆ ಎಂಬುದು ಯಾರೂ ಕದಿಯಲಾಗದ ಆಸ್ತಿ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೇ ಹೊರತು ಅವರಿಗೆ ಆಸ್ತಿ ಮಾಡುವುದಕ್ಕಲ್ಲ’ ಎಂದರು.</p>.<p>ಪುಸ್ತಕದ ಸಂಪಾದಕ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಂಬರೀಶ ಮಾತನಾಡಿ, ‘ನಾವು ಎಷ್ಟೇ ಉತ್ತಮ ಕೆಲಸ ಮಾಡಿದರೂ, ಕೆಲ ದಿನಗಳ ಬಳಿಕ ಜನ ಅದನ್ನು ಮರೆಯುತ್ತಾರೆ. ಆದರೆ, ಸಾಹಿತ್ಯಕ್ಕೆ ಸಾವಿಲ್ಲ. ಅದು ಮುಂದಿನ ತಲೆಮಾರಿಗೆ ತಲುಪುತ್ತಾ ಹೋಗುತ್ತದೆ. ಸಾಹಿತ್ಯಕ್ಕೆ ಸಾರ್ವಕಾಲಿಕತೆಯ ಶಕ್ತಿ ಇದೆ’ ಎಂದು ಹೇಳಿದರು.</p>.<p>‘ಚುಟುಕು ಸಾಹಿತ್ಯಕ್ಕೆ ಎಂ.ಜಿ.ಆರ್. ಅರಸು ಅವರ ಕೊಡುಗೆ ಅನನ್ಯ. ಒಂದು ಪುಟದಲ್ಲಿ ಹೇಳುವಂತಹ ವಿಷಯವನ್ನು ಎರಡ್ಮೂರು ಸಾಲಿನಲ್ಲಿ ಹೇಳುವ ಚುಟುಕು ಸಾಹಿತ್ಯವನ್ನು ಅವರು ಜನಪ್ರಿಯಗೊಳಿಸಿದರು. ಚುಟುಕು ಸಾಹಿತ್ಯ ಪರಿಷತ್ ಹುಟ್ಟು ಹಾಕಿ ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಶಾಖೆಗಳು ಸ್ಥಾಪನೆಯಾಗಲು ಕಾರಣವಾದರು’ ಎಂದು ತಿಳಿಸಿದರು.</p>.<p>‘ಸಾಹಿತ್ಯಕ್ಕೆ ಅರಸು ಅವರ ಕೊಡುಗೆ ಕುರಿತು ಅವರ ಒಡನಾಡಿಗಳಾದ ಎಸ್.ಜಿ. ಸಿದ್ದರಾಮಯ್ಯ, ಸಿಪಿಕೆ, ದೊಡ್ಡರಂಗೇಗೌಡ, ಡಾ. ಅರವಿಂದ ಮಾಲಗತ್ತಿ ಸೇರಿದಂತೆ ರಾಜ್ಯದ ಪ್ರಮುಖ ಸಾಹಿತಿಗಳು ಈ ಪುಸ್ತಕಕ್ಕೆ ಅರಸು ಅವರ ಕುರಿತು ಲೇಖನಗಳನ್ನು ಬರೆದಿದ್ದಾರೆ. ಈ ಪುಸ್ತಕವು ಅರಸು ಅವರ ಸಾಹಿತ್ಯ ಮತ್ತು ವ್ಯಕ್ತಿತ್ವವನ್ನು ಕಟ್ಟಿ ಕೊಡುತ್ತದೆ’ ಎಂದರು.</p>.<p>ಮಕ್ಕಳ ಹಕ್ಕುಗಳ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಜನಿ ಆರ್. ಮಾತನಾಡಿದರು. ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್ ಎಂ., ಕನಸು ಡಾನ್ಸ್ ಅಕಾಡೆಮಿಯ ನವೀನ್ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ವಿಭೂತಿಕೆರೆ, ಬ್ಲಾಸಂ ಶಾಲೆ ಸಂಸ್ಥಾಪಕ ಇಶಾಂತ್, ಆಡಳಿತಾಧಿಕಾರಿ ಸಹನಾ ಇಶಾಂತ್, ಎಆರ್ಕೆ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕಿ ಮಂಜುಳ ರವಿಕುಮಾರ್, ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷೆ ರತ್ನ ಹಾಲಪ್ಪಗೌಡ, ಬೆಂಗಳೂರು ದಕ್ಷಿಣ ಮತ್ತು ರಾಮನಗರದ ಪದಾಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ‘ಓದುವಿಕೆ ಎಂಬುದು ನಿತ್ಯ ಹರಿಯುವ ನದಿಯಂತೆ. ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲೂ ಜನರಲ್ಲಿ ಓದಿನ ಆಸಕ್ತಿ ಕುಂದಿಲ್ಲ. ಇಂದಿಗೂ ಜನಪ್ರಿಯ ಸಾಹಿತಿಗಳ ಪುಸ್ತಕಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾರಾಟವಾಗಿ ಮರು ಮುದ್ರಣ ಕಾಣುತ್ತವೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ವಿ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.</p>.<p>ನಗರದ ಬ್ಲಾಸಂ ಇಂಟರ್ನ್ಯಾಷನಲ್ ಇಂಗ್ಲಿಷ್ ಶಾಲೆ ಸಭಾಂಗಣದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಗುರುವಾರ ಹಮ್ಮಿಕೊಂಡಿದ್ದ ವಕೀಲ ಅಂಬರೀಶ ಅವರು ಸಂಪಾದಿಸಿರುವ ‘ಅರಸು ಚುಟುಕು ಚಿಲುಮೆಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜನರು ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ಪುಸ್ತಕೋದ್ಯಮವನ್ನು ಬೆಂಬಲಿಸಬೇಕು’ ಎಂದರು.</p>.<p>‘ಮಕ್ಕಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಪುಸ್ತಕಗಳ ಓದುವ ಅಭ್ಯಾಸ ಬೆಳೆಸಬೇಕು. ಇದರಲ್ಲಿ ತಂದೆ–ತಾಯಿ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು. ಉತ್ತಮ ಸಂಸ್ಕಾರವಿದ್ದಾಗ ಮಾತ್ರ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯ. ವಿದ್ಯೆ ಎಂಬುದು ಯಾರೂ ಕದಿಯಲಾಗದ ಆಸ್ತಿ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೇ ಹೊರತು ಅವರಿಗೆ ಆಸ್ತಿ ಮಾಡುವುದಕ್ಕಲ್ಲ’ ಎಂದರು.</p>.<p>ಪುಸ್ತಕದ ಸಂಪಾದಕ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಂಬರೀಶ ಮಾತನಾಡಿ, ‘ನಾವು ಎಷ್ಟೇ ಉತ್ತಮ ಕೆಲಸ ಮಾಡಿದರೂ, ಕೆಲ ದಿನಗಳ ಬಳಿಕ ಜನ ಅದನ್ನು ಮರೆಯುತ್ತಾರೆ. ಆದರೆ, ಸಾಹಿತ್ಯಕ್ಕೆ ಸಾವಿಲ್ಲ. ಅದು ಮುಂದಿನ ತಲೆಮಾರಿಗೆ ತಲುಪುತ್ತಾ ಹೋಗುತ್ತದೆ. ಸಾಹಿತ್ಯಕ್ಕೆ ಸಾರ್ವಕಾಲಿಕತೆಯ ಶಕ್ತಿ ಇದೆ’ ಎಂದು ಹೇಳಿದರು.</p>.<p>‘ಚುಟುಕು ಸಾಹಿತ್ಯಕ್ಕೆ ಎಂ.ಜಿ.ಆರ್. ಅರಸು ಅವರ ಕೊಡುಗೆ ಅನನ್ಯ. ಒಂದು ಪುಟದಲ್ಲಿ ಹೇಳುವಂತಹ ವಿಷಯವನ್ನು ಎರಡ್ಮೂರು ಸಾಲಿನಲ್ಲಿ ಹೇಳುವ ಚುಟುಕು ಸಾಹಿತ್ಯವನ್ನು ಅವರು ಜನಪ್ರಿಯಗೊಳಿಸಿದರು. ಚುಟುಕು ಸಾಹಿತ್ಯ ಪರಿಷತ್ ಹುಟ್ಟು ಹಾಕಿ ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಶಾಖೆಗಳು ಸ್ಥಾಪನೆಯಾಗಲು ಕಾರಣವಾದರು’ ಎಂದು ತಿಳಿಸಿದರು.</p>.<p>‘ಸಾಹಿತ್ಯಕ್ಕೆ ಅರಸು ಅವರ ಕೊಡುಗೆ ಕುರಿತು ಅವರ ಒಡನಾಡಿಗಳಾದ ಎಸ್.ಜಿ. ಸಿದ್ದರಾಮಯ್ಯ, ಸಿಪಿಕೆ, ದೊಡ್ಡರಂಗೇಗೌಡ, ಡಾ. ಅರವಿಂದ ಮಾಲಗತ್ತಿ ಸೇರಿದಂತೆ ರಾಜ್ಯದ ಪ್ರಮುಖ ಸಾಹಿತಿಗಳು ಈ ಪುಸ್ತಕಕ್ಕೆ ಅರಸು ಅವರ ಕುರಿತು ಲೇಖನಗಳನ್ನು ಬರೆದಿದ್ದಾರೆ. ಈ ಪುಸ್ತಕವು ಅರಸು ಅವರ ಸಾಹಿತ್ಯ ಮತ್ತು ವ್ಯಕ್ತಿತ್ವವನ್ನು ಕಟ್ಟಿ ಕೊಡುತ್ತದೆ’ ಎಂದರು.</p>.<p>ಮಕ್ಕಳ ಹಕ್ಕುಗಳ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಜನಿ ಆರ್. ಮಾತನಾಡಿದರು. ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್ ಎಂ., ಕನಸು ಡಾನ್ಸ್ ಅಕಾಡೆಮಿಯ ನವೀನ್ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ವಿಭೂತಿಕೆರೆ, ಬ್ಲಾಸಂ ಶಾಲೆ ಸಂಸ್ಥಾಪಕ ಇಶಾಂತ್, ಆಡಳಿತಾಧಿಕಾರಿ ಸಹನಾ ಇಶಾಂತ್, ಎಆರ್ಕೆ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕಿ ಮಂಜುಳ ರವಿಕುಮಾರ್, ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷೆ ರತ್ನ ಹಾಲಪ್ಪಗೌಡ, ಬೆಂಗಳೂರು ದಕ್ಷಿಣ ಮತ್ತು ರಾಮನಗರದ ಪದಾಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>