ಮುಖ್ಯಮಂತ್ರಿ ನೋಡಲೆಂದು ಬಂದರು: ಶಾಲೆ, ರಸ್ತೆ, ನೀರು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಜನರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಅದಕ್ಕಿಂತ ಹೆಚ್ಚಾಗಿ ಕುಮಾರಸ್ವಾಮಿ ಅವರನ್ನು ಕಾಣಲು ಬಂದವರೇ ಹೆಚ್ಚಾಗಿದ್ದರು. ಪೊಲೀಸರ ಬಿಗಿ ಭದ್ರತೆಯಿಂದಾಗಿ ಕೆಲವರು ಹತ್ತಿರ ಹೋಗಲು ಪರದಾಡಿದರು. ಅಭಿಮಾನಿಯೊಬ್ಬರು ಕುಮಾರಣ್ಣನಿಗಾಗಿ ನೇರಳೆ ಹಣ್ಣು ತಂದಿದ್ದರು.