ಕುದೂರು(ಮಾಗಡಿ): ಕನ್ನಸಂದ್ರ ದಾಖಲೆ ಅರೆಪಾಳ್ಯದ ಕರಡಿಗುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ನಾರಸಂದ್ರ, ಬಿಸ್ಕೂರು, ಮಾದಿಗೊಂಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ 16 ಹಳ್ಳಿಗಳ ಭಕ್ತರು ಪ್ರತಿಯೊಂದು ಗ್ರಾಮದಿಂದ ಗ್ರಾಮದೇವತೆಯನ್ನು ಅಲಂಕರಿಸಿಕೊಂಡು ಕುರ್ಜುಗಳಲ್ಲಿ ತಂದು ಮೆರವಣಿಗೆ ನಡೆಸಿದರು. ದೇವರ ಅಗ್ನಿಕುಂಡ ಮಹೋತ್ಸವ ವೈಭವದಿಂದ ನಡೆಯಿತು. ಟ್ರಸ್ಟಿನ ಪದಾಧಿಕಾರಿಗಳು ಇದ್ದರು.