<p><strong>ರಾಮನಗರ:</strong> ರಾಜ್ಯದ 25ನೇ ಮುಖ್ಯಮಂತ್ರಿ ಯಾಗಿ ಕನಕಪುರದ ಡಿ.ಕೆ.ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದು, ಕರ್ನಾಟಕಕ್ಕೆ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟ ಹೆಗ್ಗಳಿಕೆಗೆ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಪಾತ್ರವಾಗಲಿದೆ.</p><p>ಶಿವಕುಮಾರ್ ಸೇರಿದಂತೆ ಈವರೆಗೆ ಜಿಲ್ಲೆಯ ಐವರು ಮುಖ್ಯಮಂತ್ರಿ ಕುರ್ಚಿಯನ್ನು<br>ಅಲಂಕರಿಸಿದಂತಾಗಿದೆ. ರಾಜಧಾನಿಯಮಗ್ಗುಲಲ್ಲಿರುವ ಜಿಲ್ಲೆಯು ವಿಸ್ತಾರದಲ್ಲಿ ಚಿಕ್ಕದಾದರೂ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಶಕ್ತಿ ಕೇಂದ್ರವಾದ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಈವರೆಗೆ ರಾಜ್ಯದ ಚುಕ್ಕಾಣಿ ಹಿಡಿದು ಅಧಿಕಾರ ನಡೆಸಿದ್ದಾರೆ. ಈ ಸಾಲಿಗೆ ಇದೀಗ ಶಿವಕುಮಾರ್ ಸೇರಲಿದ್ದಾರೆ.</p><p>ಜಿಲ್ಲೆಯಿಂದ ದೊಡ್ಡ ಹುದ್ದೆಗೇರಿದವರ ಪೈಕಿ ಕೆಂಗಲ್ ಹನುಮಂತಯ್ಯ, ಶಿವಕುಮಾರ್ ಕಾಂಗ್ರೆಸಿಗರು. ಹೆಗಡೆ ಜನತಾ ಪಕ್ಷದವರಾಗಿದ್ದು, ದೇವೇಗೌಡ, ಕುಮಾರಸ್ವಾಮಿ ಜೆಡಿಎಸ್ನಿಂದ ಈ ಹುದ್ದೆ ಅಲಂಕರಿಸಿದರು.</p><p>ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಎರಡನೇ ಸ್ಥಾನದಲ್ಲಿ ಶಿವಮೊಗ್ಗ ಜಿಲ್ಲೆ ಇದೆ. ಜಿಲ್ಲೆಯವರಾದ ಕಡಿದಾಳ್ ಮಂಜಪ್ಪ,<br>ಎಸ್. ಬಂಗಾರಪ್ಪ, ಬಿ.ಎಸ್. ಯುಡಿಯೂರಪ್ಪ ಅಧಿಕಾರ ನಡೆಸಿದ್ದಾರೆ.</p><p><strong>ಪೂರ್ಣಾವಧಿ ಅದೃಷ್ಟವಿಲ್ಲ: </strong>ಜಿಲ್ಲೆಯಿಂದ ಐವರು ಮುಖ್ಯಮಂತ್ರಿ ಹುದ್ದೆಗೇರಿದರೂ, ಯಾರಿಗೂ 5 ವರ್ಷಗಳ ಪೂರ್ಣಾವಧಿ ಅಧಿಕಾರ ಅನುಭವಿಸಲು ಸಾಧ್ಯವಾಗಿಲ್ಲ. ಕೆಂಗಲ್ ಅವರಿಗೆ 4 ವರ್ಷ 5 ತಿಂಗಳು ಅವಕಾಶ ಸಿಕ್ಕರೆ, ಹೆಗಡೆ ಕೇವಲ 1 ವರ್ಷವಷ್ಟೇ ಮುಖ್ಯಮಂತ್ರಿಯಾಗಿದ್ದರು. ದೇವೇಗೌಡ 17 ತಿಂಗಳು ಆಡಳಿತ ನಡೆಸಿದ್ದರು.</p><p>ಕುಮಾರಸ್ವಾಮಿ ಮೊದಲ ಅವಧಿಯಲ್ಲಿ 20 ತಿಂಗಳು ಮತ್ತು ಎರಡನೇ ಬಾರಿಗೆ 14 ತಿಂಗಳಷ್ಟೇ ಅಧಿಕಾರ ಅನುಭವಿಸಿದರು. ಇದೀಗ ಡಿ.ಕೆ. ಶಿವಕುಮಾರ್ ಅವರಿಗೆ 24 ತಿಂಗಳಷ್ಟೇ ಅಧಿಕಾರ ಸಿಗಲಿದೆ.</p><p>ಬೆಂಗಳೂರು ನಗರದಿಂದ 1986ರಲ್ಲಿ ಬೇರ್ಪಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಯಿತು. 2007ರಲ್ಲಿ ಗ್ರಾಮಾಂತರದಿಂದ ಪ್ರತ್ಯೇಕವಾಗಿ ರಾಮನಗರ ಜಿಲ್ಲೆಯಾಯಿತು. 2025ರಲ್ಲಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣಗೊಂಡಿತು.</p><p><strong>ಇಬ್ಬರು ಸ್ಥಳೀಯರು; ಮೂವರು ಹೊರಗಿನವರು</strong></p><p>ಜಿಲ್ಲೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿದವರಲ್ಲಿ ಇಬ್ಬರು ಸ್ಥಳೀಯರು ಹಾಗೂ ಮೂವರು ಹೊರಗಿನವರು. ಮೈಸೂರು ಸಂಸ್ಥಾನದ ಮೊದಲ ಚುನಾಯಿತ ಮುಖ್ಯಮಂತ್ರಿಯಾಗಿದ್ದ (1952–1956) ಕೆಂಗಲ್ ಹನುಮಂತಯ್ಯ ರಾಮನಗರ ತಾಲ್ಲೂಕಿನ ಲಕ್ಕಪ್ಪನಹಳ್ಳಿ ಗ್ರಾಮದವರು. ಡಿ.ಕೆ. ಶಿವಕುಮಾರ್ ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯವರು.</p><p>ರಾಜ್ಯದ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ (1985-1988) ರಾಮಕೃಷ್ಣ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಎಚ್.ಡಿ. ದೇವೇಗೌಡ (1994–1996) ಮತ್ತು ಕುಮಾರಸ್ವಾಮಿ (2006–07 ಮತ್ತು 2018–19) ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲ್ಲೂಕಿನ ಹರದನಹಳ್ಳಿಯವರು. ಬದಲಾದ ಕಾಲಘಟ್ಟ ಮತ್ತು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದು ರಾಜಕೀಯ ಅಸ್ತಿತ್ವ ಕಂಡುಕೊಂಡರು. ದೇವೇಗೌಡರು ಇಲ್ಲಿಂದಲೇ ಪ್ರಧಾನಿ ಹುದ್ದೆಗೇರಿದ್ದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ರಾಜ್ಯದ 25ನೇ ಮುಖ್ಯಮಂತ್ರಿ ಯಾಗಿ ಕನಕಪುರದ ಡಿ.ಕೆ.ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದು, ಕರ್ನಾಟಕಕ್ಕೆ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟ ಹೆಗ್ಗಳಿಕೆಗೆ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಪಾತ್ರವಾಗಲಿದೆ.</p><p>ಶಿವಕುಮಾರ್ ಸೇರಿದಂತೆ ಈವರೆಗೆ ಜಿಲ್ಲೆಯ ಐವರು ಮುಖ್ಯಮಂತ್ರಿ ಕುರ್ಚಿಯನ್ನು<br>ಅಲಂಕರಿಸಿದಂತಾಗಿದೆ. ರಾಜಧಾನಿಯಮಗ್ಗುಲಲ್ಲಿರುವ ಜಿಲ್ಲೆಯು ವಿಸ್ತಾರದಲ್ಲಿ ಚಿಕ್ಕದಾದರೂ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಶಕ್ತಿ ಕೇಂದ್ರವಾದ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಈವರೆಗೆ ರಾಜ್ಯದ ಚುಕ್ಕಾಣಿ ಹಿಡಿದು ಅಧಿಕಾರ ನಡೆಸಿದ್ದಾರೆ. ಈ ಸಾಲಿಗೆ ಇದೀಗ ಶಿವಕುಮಾರ್ ಸೇರಲಿದ್ದಾರೆ.</p><p>ಜಿಲ್ಲೆಯಿಂದ ದೊಡ್ಡ ಹುದ್ದೆಗೇರಿದವರ ಪೈಕಿ ಕೆಂಗಲ್ ಹನುಮಂತಯ್ಯ, ಶಿವಕುಮಾರ್ ಕಾಂಗ್ರೆಸಿಗರು. ಹೆಗಡೆ ಜನತಾ ಪಕ್ಷದವರಾಗಿದ್ದು, ದೇವೇಗೌಡ, ಕುಮಾರಸ್ವಾಮಿ ಜೆಡಿಎಸ್ನಿಂದ ಈ ಹುದ್ದೆ ಅಲಂಕರಿಸಿದರು.</p><p>ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಎರಡನೇ ಸ್ಥಾನದಲ್ಲಿ ಶಿವಮೊಗ್ಗ ಜಿಲ್ಲೆ ಇದೆ. ಜಿಲ್ಲೆಯವರಾದ ಕಡಿದಾಳ್ ಮಂಜಪ್ಪ,<br>ಎಸ್. ಬಂಗಾರಪ್ಪ, ಬಿ.ಎಸ್. ಯುಡಿಯೂರಪ್ಪ ಅಧಿಕಾರ ನಡೆಸಿದ್ದಾರೆ.</p><p><strong>ಪೂರ್ಣಾವಧಿ ಅದೃಷ್ಟವಿಲ್ಲ: </strong>ಜಿಲ್ಲೆಯಿಂದ ಐವರು ಮುಖ್ಯಮಂತ್ರಿ ಹುದ್ದೆಗೇರಿದರೂ, ಯಾರಿಗೂ 5 ವರ್ಷಗಳ ಪೂರ್ಣಾವಧಿ ಅಧಿಕಾರ ಅನುಭವಿಸಲು ಸಾಧ್ಯವಾಗಿಲ್ಲ. ಕೆಂಗಲ್ ಅವರಿಗೆ 4 ವರ್ಷ 5 ತಿಂಗಳು ಅವಕಾಶ ಸಿಕ್ಕರೆ, ಹೆಗಡೆ ಕೇವಲ 1 ವರ್ಷವಷ್ಟೇ ಮುಖ್ಯಮಂತ್ರಿಯಾಗಿದ್ದರು. ದೇವೇಗೌಡ 17 ತಿಂಗಳು ಆಡಳಿತ ನಡೆಸಿದ್ದರು.</p><p>ಕುಮಾರಸ್ವಾಮಿ ಮೊದಲ ಅವಧಿಯಲ್ಲಿ 20 ತಿಂಗಳು ಮತ್ತು ಎರಡನೇ ಬಾರಿಗೆ 14 ತಿಂಗಳಷ್ಟೇ ಅಧಿಕಾರ ಅನುಭವಿಸಿದರು. ಇದೀಗ ಡಿ.ಕೆ. ಶಿವಕುಮಾರ್ ಅವರಿಗೆ 24 ತಿಂಗಳಷ್ಟೇ ಅಧಿಕಾರ ಸಿಗಲಿದೆ.</p><p>ಬೆಂಗಳೂರು ನಗರದಿಂದ 1986ರಲ್ಲಿ ಬೇರ್ಪಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಯಿತು. 2007ರಲ್ಲಿ ಗ್ರಾಮಾಂತರದಿಂದ ಪ್ರತ್ಯೇಕವಾಗಿ ರಾಮನಗರ ಜಿಲ್ಲೆಯಾಯಿತು. 2025ರಲ್ಲಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣಗೊಂಡಿತು.</p><p><strong>ಇಬ್ಬರು ಸ್ಥಳೀಯರು; ಮೂವರು ಹೊರಗಿನವರು</strong></p><p>ಜಿಲ್ಲೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿದವರಲ್ಲಿ ಇಬ್ಬರು ಸ್ಥಳೀಯರು ಹಾಗೂ ಮೂವರು ಹೊರಗಿನವರು. ಮೈಸೂರು ಸಂಸ್ಥಾನದ ಮೊದಲ ಚುನಾಯಿತ ಮುಖ್ಯಮಂತ್ರಿಯಾಗಿದ್ದ (1952–1956) ಕೆಂಗಲ್ ಹನುಮಂತಯ್ಯ ರಾಮನಗರ ತಾಲ್ಲೂಕಿನ ಲಕ್ಕಪ್ಪನಹಳ್ಳಿ ಗ್ರಾಮದವರು. ಡಿ.ಕೆ. ಶಿವಕುಮಾರ್ ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯವರು.</p><p>ರಾಜ್ಯದ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ (1985-1988) ರಾಮಕೃಷ್ಣ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಎಚ್.ಡಿ. ದೇವೇಗೌಡ (1994–1996) ಮತ್ತು ಕುಮಾರಸ್ವಾಮಿ (2006–07 ಮತ್ತು 2018–19) ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲ್ಲೂಕಿನ ಹರದನಹಳ್ಳಿಯವರು. ಬದಲಾದ ಕಾಲಘಟ್ಟ ಮತ್ತು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದು ರಾಜಕೀಯ ಅಸ್ತಿತ್ವ ಕಂಡುಕೊಂಡರು. ದೇವೇಗೌಡರು ಇಲ್ಲಿಂದಲೇ ಪ್ರಧಾನಿ ಹುದ್ದೆಗೇರಿದ್ದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>