ರೈತರು ಅಧಿಕ ಆದಾಯಕ್ಕಾಗಿ ತೊಗರಿ ಬೆಳೆಯಲ್ಲಿ ಅಂತರ ಬೆಳೆಯಾಗಿ ಅಲಸಂದೆ ಬೆಳೆಯುವ ತಂತ್ರಜ್ಞಾನವನ್ನು 2019–20ರ ಮುಂಗಾರು ಹಂಗಾಮಿನಲ್ಲಿ ಕಾಳಾರಿ ಗ್ರಾಮದ ಆಯ್ದ 10 ರೈತರ ತಾಕುಗಳಲ್ಲಿ ಕೈಗೊಳ್ಳಲಾಗಿತ್ತು. ಪ್ರಾತ್ಯಕ್ಷಿಕೆಯ ಅಂಗವಾಗಿ ತೊಗರಿ ಬೆಳೆಯ ನೂತನ ತಳಿ ಬಿ.ಆರ್.ಜಿ.-3 ರಲ್ಲಿ ಅಲಸಂದೆ ಬೆಳೆಯ ನೂತನ ತಳಿ ಕೆ.ಬಿ.ಸಿ.-9 ಅನ್ನು ಅಂತರ ಬೆಳೆಯಾಗಿ ಬೆಳೆದು ತೋರಿಸಲಾಯಿತು. ಬಿತ್ತನೆ ‘ಸಮಯದಲ್ಲಿ ಜೈವಿಕ ಗೊಬ್ಬರ ರೈಜೋಬಿಯಂನಿಂದ ಬೀಜೋಪಚಾರ, ಸಮಗ್ರ ಪೋಷಕಾಂಶ ನಿರ್ವಹಣೆ, ಲಘು ಪೋಷಕಾಂಶದ ಮಿಶ್ರಣ (ಪಲ್ಸ್ ಮ್ಯಾಜಿಕ್), ಬೆಳೆ ಚೆನ್ನಾಗಿ ಒಂದು ಕಟಾವಿಗೆ ಬಂದಿರುವ ಈ ಸಮಯದಲ್ಲಿ ಈ ತಂತ್ರಜ್ಞಾನ ಮತ್ತು ತಳಿಗಳನ್ನು ಇತರ ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ತಮ್ಮ ಜಮೀನಿನಲ್ಲಿ ತೊಗರಿ ಮತ್ತು ಅಲಸಂದೆ ಅಂತರ ಬೆಳೆಯಾಗಿ ಬೆಳೆದು ಯಶಸ್ವಿಯಾಗಬಹುದು. ಬಿ.ಆರ್.ಜಿ.-3 ತಳಿಯು ಸೊರಗು ರೋಗ ಹಾಗೂ ಬಂಜೆ ರೋಗ ನಿರೋಧಕ ತಳಿಯಾಗಿದ್ದು, ಅಧಿಕ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ’ ಎಂದರು.