ಕನಕಪುರ: ಇಲ್ಲಿನ ಕೆರಳಾಳುಸಂದ್ರದಲ್ಲಿ ಊರ ಹಬ್ಬದ ಪ್ರಯುಕ್ತ ಗ್ರಾಮದ ರಂಗ ಕಲಾವಿದರಿಂದ ‘ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ’ ಪೌರಾಣಿಕ ನಾಟಕ ಬುಧವಾರ ರಾತ್ರಿ ನಡೆಯಿತು.
ನಾಟಕ ರಾತ್ರಿ 8 ರಿಂದ ಮುಂಜಾನೆ ವರೆಗೂ ನಡೆಯಿತು. ಗ್ರಾಮಸ್ಥರು ಹಾಗೂ ಹಬ್ಬಕ್ಕೆ ಬಂದಿದ್ದ ನೆಂಟರು ನಾಟಕವನ್ನು ಕಣ್ತುಂಬಿಕೊಂಡರು.
ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬದಲಾದ ಪರಿಸ್ಥಿತಿಯಲ್ಲೂ ಕಲಾವಿದರು ನಾಟಕದ ಪರಂಪರೆಯನ್ನು ಬಿಡದೆ, ನಾಟಕ ಕಲಿತು ಪ್ರದರ್ಶನ ಮಾಡುವ ಮೂಲಕ ರಂಗ ಕಲೆಯನ್ನು ಇನ್ನು ಜೀವಂತವಾಗಿಟ್ಟುಕೊಂಡು ಬಂದಿದ್ದಾರೆ ಎಂಬ ಮೆಚ್ಚುಗೆ ವ್ಯಕ್ತವಾಯಿತು.
ನಾಟಕದ ಎಲ್ಲ ಪಾತ್ರಧಾರಿಗಳು ಉತ್ತಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.