ತಟ್ಟಿಗೌಡನದೊಡ್ಡಿ, ತಮ್ಮಣ್ಣದೊಡ್ಡಿ, ಕೆಂಚನಕುಪ್ಪೆ, ಅಲಸಿನಮರದೊಡ್ಡಿ, ಕರಿಯಪ್ಪನದೊಡ್ಡಿ, ಬಾನಂದೂರು ಹಾಗೂ ಗೊಲ್ಲಹಳ್ಳಿ ಗ್ರಾಮಗಳಲ್ಲಿ ಸುಮಾರು ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇದೇ ಕೆರೆ ನಂಬಿ ವ್ಯವಸಾಯ ಮಾಡಲಾಗುತ್ತಿದೆ. ಇಲ್ಲಿ ಹೆಚ್ಚಾಗಿ ಕಬ್ಬು, ಭತ್ತ, ರಾಗಿ ಬೆಳೆಯಲಾಗುತ್ತದೆ. ಈ ಹಿಂದೆ ಕೆರೆಯಲ್ಲಿ ನೀರು ತುಂಬಿದ್ದರೂ ನೀರು ಹರಿಸಿರಲಿಲ್ಲ. ಕಲುಷಿತ ನೀರಿನಿಂದಲೇ ಕೆಲವು ವ್ಯವಸಾಯ ಮಾಡಲಾಗುತ್ತಿದೆ.