ರಾಮನಗರ: ತಾಲ್ಲೂಕಿನ ಕವಣಾಪುರ ಗ್ರಾಮದ ಮನೆಯೊಂದಕ್ಕೆ ನುಗ್ಗಿದ್ದ ಚಿರತೆಯನ್ನು ಮಂಗಳವಾರ ಮುಂಜಾನೆ ಸೆರೆ ಹಿಡಿಯಲಾಯಿತು.
ಸೋಮವಾರ ತಡರಾತ್ರಿ ಗ್ರಾಮದ ಚಿಕ್ಕರಾಜು ಎಂಬುವರ ದನದ ಕೊಟ್ಟಿಗೆಯಲ್ಲಿನ ಕುರಿ ಹಿಡಿಯಲು ಚಿರತೆ ನುಗ್ಗಿತ್ತು. ಈ ಸಂದರ್ಭ ಮನೆಯವರು ಎಚ್ಚೆತ್ತು ಮನೆಯ ಬಾಗಿಲು ಮುಚ್ಚಿದ್ದರು. ಇದರಿಂದಾಗಿ ಚಿರತೆ ಕೊಟ್ಟಿಗೆಯ ಒಳಗೇ ಸೆರೆಯಾಗಿತ್ತು.
ಬನ್ನೇರುಘಟ್ಟ ಅರಣ್ಯ ವಲಯದ ವೈದ್ಯರು ಅರೆವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿದರು. ಎರಡು ವರ್ಷದ ಗಂಡು ಚಿರತೆ ಇದಾಗಿದ್ದು, ಬನ್ನೇರುಘಟ್ಟ ಪ್ರದೇಶಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.