ರೈತ ಬಸವರಾಜಯ್ಯ ಮಾತನಾಡಿ, ನಮ್ಮ ಬಾಲ್ಯದಲ್ಲಿ ಅದರಂಗಿ ಸುತ್ತಮುತ್ತ ದೊಡ್ಡದೊಡ್ಡ ಮರಗಳಿದ್ದವು. ದನಕುರಿ ಮೇಕೆ ಮೇಯಿಸಲು ಹೋದಾಗ ಹೊಟ್ಟೆತುಂಬುವಷ್ಟು ಹಣ್ಣುಗಳು ಸಿಕ್ಕುತ್ತಿದ್ದವು. ತುಂತುರು ಮಳೆಯ ನಡುವೆ ನೆಟ್ಟ ಮಾವಿನ ಓಟೆಗಳು ಮೊಳಕೆ ಒಡೆದು ಸಸಿಗಳಾಗುವುದನ್ನು ನೋಡುವುದೇ ಒಂದು ಸಂಭ್ರಮ ಎಂದು ಸಂತಸ ವ್ಯಕ್ತಪಡಿಸಿದರು.