<p><strong>ಮಾಗಡಿ</strong>: ಕಳರಿಪಯಟ್ಟು ಎಲ್ಲ ಕಲೆಗಳಿಗೆ ತಾಯಿ ಕಲೆಯಾಗಿದ್ದು, ಮಕ್ಕಳ ಭವಿಷ್ಯದಲ್ಲಿ ಸಪ್ತ ಚಕ್ರಗಳನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಲು ಇದು ಸಹಕಾರಿ. ಈ ಕಲೆಯನ್ನು ಮೈಗೂಡಿಸಿಕೊಂಡರೆ ಬದುಕಿನ ಎಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನಾದರೂ ಎದುರಿಸಲು ಮನಸ್ಸು ಸದೃಢವಾಗುತ್ತದೆ ಎಂದು ಕೇರಳಂನ ಯೋಗ ಕಳರಿ ಶಿಕ್ಷಕ ಎಸ್.ಕೆ. ರಾಜೇಶ್ ತಿಳಿಸಿದರು.</p>.<p>ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ತಿಪ್ಪಗೊಂಡನಹಳ್ಳಿ ಸಮೀಪದ ವಿವೇಕ ಭಾರತಿ ಪ್ರಗತಿ ಕೇಂದ್ರದಲ್ಲಿ ಯೋಗಶ್ರೀ ಗುರುಕುಲದಿಂದ ನಡೆದ ‘ಯೋಗ ಬಿಗ್ ಬಾಸ್’ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.</p>.<p>ಕೇರಳದ ಪ್ರಸಿದ್ಧ ಸಮರ ಕಲೆಗಳಲ್ಲಿ ಒಂದಾದ ಕಳರಿ ವಿದ್ಯೆ ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇದು ದೇಹದ ಶಕ್ತಿ, ಚುರುಕುತನ, ಧೈರ್ಯ ಮತ್ತು ಆತ್ಮರಕ್ಷಣೆ ಕಲಿಸುತ್ತದೆ. ಈ ವಿದ್ಯೆಯಲ್ಲಿ ಕೇವಲ ಕೈ ಯುದ್ಧ ಮಾತ್ರವಲ್ಲದೆ ಕತ್ತಿ, ಗುರಾಣಿ, ಭಲ್ಲೆ ಮೊದಲಾದ ಆಯುಧಗಳ ಬಳಕೆ ಕಲಿಸಲಾಗುತ್ತದೆ. ಯೋಗ, ಧ್ಯಾನ ಮತ್ತು ಉಸಿರಾಟದ ಅಭ್ಯಾಸಗಳೂ ಇದರಲ್ಲಿ ಅಡಕವಾಗಿವೆ ಎಂದು ವಿವರಿಸಿದರು.</p>.<p>ವಿದ್ಯಾರ್ಥಿಗಳು ಮೊದಲು ದೇಹವನ್ನು ಬಲಿಷ್ಠವಾಗಿಸಲು ವಿವಿಧ ವ್ಯಾಯಾಮಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಆನಂತರ ಹಂತ ಹಂತವಾಗಿ ಯುದ್ಧಕಲೆಗಳನ್ನು ಕಲಿಯುತ್ತಾರೆ. ಈ ವಿದ್ಯೆ ಕೇವಲ ಹೋರಾಟಕ್ಕೆ ಸೀಮಿತವಾಗಿರದೆ ಶಿಸ್ತು, ಆತ್ಮವಿಶ್ವಾಸ ಮತ್ತು ಮನೋನಿಗ್ರಹ ಬೆಳೆಸಲು ಪೂರಕವಾಗಿದೆ ಎಂದು ಮಾಹಿತಿ ನೀಡಿದರು.</p>.<p>ವಿವೇಕ ಭಾರತಿ ಪ್ರಗತಿ ಕೇಂದ್ರದ ಸಂಸ್ಥಾಪಕ ವಿ. ವಿಜಯ್ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳ ಮುಂದಿನ ಜೀವನಕ್ಕೆ ಅಗತ್ಯವಿರುವ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಸಮಗ್ರವಾಗಿ ಕಲಿಯುತ್ತಿದ್ದಾರೆ ಎಂದು ವಿವರಿಸಿದರು.</p>.<p>ಯೋಗಶ್ರೀ ಗುರುಕುಲದ ಯೋಗ ಶಿಕ್ಷಕ ಮಲ್ಲಣ್ಣ, ಯೋಗ ಶಿಕ್ಷಕಿಯರಾದ ಪವಿತ್ರ, ವಾಣಿಶ್ರೀ, ಸುಜಾತ ಹಿರೇಮಠ್ ಹಾಗೂ ರೂಪೇಶ್ ಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ಕಳರಿಪಯಟ್ಟು ಎಲ್ಲ ಕಲೆಗಳಿಗೆ ತಾಯಿ ಕಲೆಯಾಗಿದ್ದು, ಮಕ್ಕಳ ಭವಿಷ್ಯದಲ್ಲಿ ಸಪ್ತ ಚಕ್ರಗಳನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಲು ಇದು ಸಹಕಾರಿ. ಈ ಕಲೆಯನ್ನು ಮೈಗೂಡಿಸಿಕೊಂಡರೆ ಬದುಕಿನ ಎಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನಾದರೂ ಎದುರಿಸಲು ಮನಸ್ಸು ಸದೃಢವಾಗುತ್ತದೆ ಎಂದು ಕೇರಳಂನ ಯೋಗ ಕಳರಿ ಶಿಕ್ಷಕ ಎಸ್.ಕೆ. ರಾಜೇಶ್ ತಿಳಿಸಿದರು.</p>.<p>ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ತಿಪ್ಪಗೊಂಡನಹಳ್ಳಿ ಸಮೀಪದ ವಿವೇಕ ಭಾರತಿ ಪ್ರಗತಿ ಕೇಂದ್ರದಲ್ಲಿ ಯೋಗಶ್ರೀ ಗುರುಕುಲದಿಂದ ನಡೆದ ‘ಯೋಗ ಬಿಗ್ ಬಾಸ್’ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.</p>.<p>ಕೇರಳದ ಪ್ರಸಿದ್ಧ ಸಮರ ಕಲೆಗಳಲ್ಲಿ ಒಂದಾದ ಕಳರಿ ವಿದ್ಯೆ ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇದು ದೇಹದ ಶಕ್ತಿ, ಚುರುಕುತನ, ಧೈರ್ಯ ಮತ್ತು ಆತ್ಮರಕ್ಷಣೆ ಕಲಿಸುತ್ತದೆ. ಈ ವಿದ್ಯೆಯಲ್ಲಿ ಕೇವಲ ಕೈ ಯುದ್ಧ ಮಾತ್ರವಲ್ಲದೆ ಕತ್ತಿ, ಗುರಾಣಿ, ಭಲ್ಲೆ ಮೊದಲಾದ ಆಯುಧಗಳ ಬಳಕೆ ಕಲಿಸಲಾಗುತ್ತದೆ. ಯೋಗ, ಧ್ಯಾನ ಮತ್ತು ಉಸಿರಾಟದ ಅಭ್ಯಾಸಗಳೂ ಇದರಲ್ಲಿ ಅಡಕವಾಗಿವೆ ಎಂದು ವಿವರಿಸಿದರು.</p>.<p>ವಿದ್ಯಾರ್ಥಿಗಳು ಮೊದಲು ದೇಹವನ್ನು ಬಲಿಷ್ಠವಾಗಿಸಲು ವಿವಿಧ ವ್ಯಾಯಾಮಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಆನಂತರ ಹಂತ ಹಂತವಾಗಿ ಯುದ್ಧಕಲೆಗಳನ್ನು ಕಲಿಯುತ್ತಾರೆ. ಈ ವಿದ್ಯೆ ಕೇವಲ ಹೋರಾಟಕ್ಕೆ ಸೀಮಿತವಾಗಿರದೆ ಶಿಸ್ತು, ಆತ್ಮವಿಶ್ವಾಸ ಮತ್ತು ಮನೋನಿಗ್ರಹ ಬೆಳೆಸಲು ಪೂರಕವಾಗಿದೆ ಎಂದು ಮಾಹಿತಿ ನೀಡಿದರು.</p>.<p>ವಿವೇಕ ಭಾರತಿ ಪ್ರಗತಿ ಕೇಂದ್ರದ ಸಂಸ್ಥಾಪಕ ವಿ. ವಿಜಯ್ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳ ಮುಂದಿನ ಜೀವನಕ್ಕೆ ಅಗತ್ಯವಿರುವ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಸಮಗ್ರವಾಗಿ ಕಲಿಯುತ್ತಿದ್ದಾರೆ ಎಂದು ವಿವರಿಸಿದರು.</p>.<p>ಯೋಗಶ್ರೀ ಗುರುಕುಲದ ಯೋಗ ಶಿಕ್ಷಕ ಮಲ್ಲಣ್ಣ, ಯೋಗ ಶಿಕ್ಷಕಿಯರಾದ ಪವಿತ್ರ, ವಾಣಿಶ್ರೀ, ಸುಜಾತ ಹಿರೇಮಠ್ ಹಾಗೂ ರೂಪೇಶ್ ಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>