<p><em>ಜೇನು</em></p>.<p>ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ವಿಶ್ವ ಜೇನು ದಿನಾಚರಣೆ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.</p>.<p>ರೈತರು ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಜೇನು ಸಾಕಾಣಿಕೆ ಉಪಕಸುಬಾಗಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಆದಾಯ ಹೇಗೆ ದ್ವಿಗುಣಗೊಳಿಸಿಕೊಳ್ಳಬಹುದು ಎಂಬ ಬಗ್ಗೆ ಕಾರ್ಯಕ್ರಮದಲ್ಲಿ ಸುದೀರ್ಘ ಚರ್ಚೆ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.</p>.<p>ಜೇನು ಸಾಕಾಣಿಕೆ ಮತ್ತು ಮೌಲ್ಯವರ್ಧನೆಗೆ ಒತ್ತು: ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಕೇಂದ್ರದ ಮುಖ್ಯಸ್ಥರಾದ ಡಾ.ಶ್ವೇತ ಬಿ.ಎಸ್., ರೈತರು ತಮ್ಮ ದೈನಂದಿನ ಕೃಷಿ ಚಟುವಟಿಕೆ ಜೊತೆಗೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಕಡಿಮೆ ವೆಚ್ಚದ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಕೇಂದ್ರದ ಸಸ್ಯಸಂರಕ್ಷಣಾ ವಿಜ್ಞಾನಿ ಡಾ.ತಾರಿಣಿ ಕೆ.ಬಿ.ಮಾತನಾಡಿ, ವಿಶ್ವದ ಶೇ70ರಷ್ಟು ಪ್ರಮುಖ ಬೆಳೆಗಳು ಜೇನು ನೊಣಗಳ ಪರಾಗಸ್ಪರ್ಶದಿಂದಲೇ ಇಳುವರಿ ನೀಡುತ್ತವೆ ಎಂದರು.</p>.<p>ಜೇನು ನೊಣಗಳ ವಿವಿಧ ಪ್ರಭೇದ, ಅವುಗಳ ಜೀವನ ಚರಿತ್ರೆ ಮತ್ತು ಕುಟುಂಬ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಅವರು, ಜೇನು ಪೆಟ್ಟಿಗೆಗೆ ಜೇನು ಕುಟುಂಬವನ್ನು ವರ್ಗಾಯಿಸುವುದು ಹಾಗೂ ವೈಜ್ಞಾನಿಕವಾಗಿ ಜೇನುತುಪ್ಪ ತೆಗೆಯುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು.</p>.<p>ಗೃಹ ವಿಜ್ಞಾನಿ ಡಾ.ಅನಿತಾ ಎಸ್.ಮಾತನಾಡಿ, ಜೇನುತುಪ್ಪದ ಔಷಧೀಯ ಗುಣ ಪಟ್ಟಿ ಮಾಡುತ್ತಾ, ಜೇನುತುಪ್ಪ ಕೇವಲ ಸಿಹಿಗೆ ಪರ್ಯಾಯವಲ್ಲ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವ ಶೀತ-ಕೆಮ್ಮಿಗೆ ನೈಸರ್ಗಿಕ ಪರಿಹಾರ ನೀಡುವ ಹಾಗೂ ಹೃದಯದ ಆರೋಗ್ಯ ಕಾಪಾಡುವ ಅದ್ಭುತ ಆಹಾರವಾಗಿದೆ. ರೈತರು ಜೇನು ಸಂಸ್ಕರಣೆ, ಬ್ರಾಂಡಿಂಗ್ ಮತ್ತು ನೇರ ಮಾರುಕಟ್ಟೆ ಪ್ರಕ್ರಿಯೆ ಕಲಿತುಕೊಳ್ಳಬೇಕು ಎಂದು ತಿಳಿಸಿದರು.</p>.<p>ಡಾ.ಸೌಜನ್ಯ ಎಸ್., ಆಧುನಿಕ ಜೇನುಕೃಷಿ ಪಿತಾಮಹ ಆ್ಯಂಟೋನ್ ಜಾನಾ ಅವರ ಜನ್ಮದಿನದ ಸವಿನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳು ಜೇನುತುಪ್ಪ ತೆಗೆಯುವ ಸಮಯವಾಗಿದೆ. ಇದು ಸಮೃದ್ಧಿ ಸಂಕೇತ ಎಂದರು.</p>.<p>ಪ್ರಗತಿಪರ ಕೃಷಿಕ ಡಾ.ರಾಮಚಂದ್ರಯ್ಯ ಮಾತನಾಡಿ, ರಾಸಾಯನಿಕ ಮುಕ್ತ ಕೃಷಿ ಮತ್ತು ಬೆಳೆ ಪರಿವರ್ತನೆಯಿಂದ ಹೆಚ್ಚಿನ ಆದಾಯ ಗಳಿಸುವಂತೆ ರೈತರಿಗೆ ಕಿವಿಮಾತು ಹೇಳಿದರು.</p>.<p>ಡಾ.ಸುನೀಲ್ ಜೋಶಿ,ಡಾ.ಜಗದೀಶ್, ಡಾ.ಮಧು ಟಿ.ಎನ್ ವಿಜ್ಞಾನಿಗಳು ಸಮತೋಲಿತ ಗೊಬ್ಬರ ಮತ್ತು ವಿಜ್ಞಾನಾಧಾರಿತ ಪೋಷಕಾಂಶ ಬಳಕೆ ಬಗ್ಗೆ ಅರಿವು ಮೂಡಿಸಿದರು.</p>.<p>ತೋಟಗಾರಿಕಾ ವಿಜ್ಞಾನಿ ಡಾ.ದೀಪಾ ಪೂಜಾರ ಮಾತನಾಡಿ, ಮಾವಿನ ಬೆಳೆಯಲ್ಲಿ ಸವರಿಕೆ ಮಾಡುವುದರಿಂದ ಸಮಗ್ರ ನಿರ್ವಹಣೆ ಮತ್ತು ಉತ್ತಮ ಗುಣಮಟ್ಟದ ಇಳುವರಿ ಪಡೆಯುವ ವಿಧಾನವನ್ನು ವಿವರಿಸಿದರು.</p>.<p>ಕೇಂದ್ರದ ವಿಜ್ಞಾನಿ ಡಾ.ಪ್ರಮೋದ್ ಜಿ.ಮಾತನಾಡಿ, ಹೆಚ್ಚು ಇಳುವರಿ ನೀಡುವ ಸುಧಾರಿತ ತಳಿಗಳ ಪರಿಚಯ, ಬೀಜ, ಮಣ್ಣು ಮತ್ತು ನೀರು ಸಂರಕ್ಷಣೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.</p>.<p>ತರಬೇತಿ ಹಾಗೂ ದಿನಾಚರಣೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ 20ಕ್ಕೂ ಹೆಚ್ಚು ಪ್ರಗತಿಪರ ರೈತರು ಮತ್ತು ಮಹಿಳೆಯರು ಭಾಗವಹಿಸಿ ತಾಂತ್ರಿಕ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಂಡರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-14-840934566</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ಜೇನು</em></p>.<p>ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ವಿಶ್ವ ಜೇನು ದಿನಾಚರಣೆ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.</p>.<p>ರೈತರು ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಜೇನು ಸಾಕಾಣಿಕೆ ಉಪಕಸುಬಾಗಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಆದಾಯ ಹೇಗೆ ದ್ವಿಗುಣಗೊಳಿಸಿಕೊಳ್ಳಬಹುದು ಎಂಬ ಬಗ್ಗೆ ಕಾರ್ಯಕ್ರಮದಲ್ಲಿ ಸುದೀರ್ಘ ಚರ್ಚೆ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.</p>.<p>ಜೇನು ಸಾಕಾಣಿಕೆ ಮತ್ತು ಮೌಲ್ಯವರ್ಧನೆಗೆ ಒತ್ತು: ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಕೇಂದ್ರದ ಮುಖ್ಯಸ್ಥರಾದ ಡಾ.ಶ್ವೇತ ಬಿ.ಎಸ್., ರೈತರು ತಮ್ಮ ದೈನಂದಿನ ಕೃಷಿ ಚಟುವಟಿಕೆ ಜೊತೆಗೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಕಡಿಮೆ ವೆಚ್ಚದ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಕೇಂದ್ರದ ಸಸ್ಯಸಂರಕ್ಷಣಾ ವಿಜ್ಞಾನಿ ಡಾ.ತಾರಿಣಿ ಕೆ.ಬಿ.ಮಾತನಾಡಿ, ವಿಶ್ವದ ಶೇ70ರಷ್ಟು ಪ್ರಮುಖ ಬೆಳೆಗಳು ಜೇನು ನೊಣಗಳ ಪರಾಗಸ್ಪರ್ಶದಿಂದಲೇ ಇಳುವರಿ ನೀಡುತ್ತವೆ ಎಂದರು.</p>.<p>ಜೇನು ನೊಣಗಳ ವಿವಿಧ ಪ್ರಭೇದ, ಅವುಗಳ ಜೀವನ ಚರಿತ್ರೆ ಮತ್ತು ಕುಟುಂಬ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಅವರು, ಜೇನು ಪೆಟ್ಟಿಗೆಗೆ ಜೇನು ಕುಟುಂಬವನ್ನು ವರ್ಗಾಯಿಸುವುದು ಹಾಗೂ ವೈಜ್ಞಾನಿಕವಾಗಿ ಜೇನುತುಪ್ಪ ತೆಗೆಯುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು.</p>.<p>ಗೃಹ ವಿಜ್ಞಾನಿ ಡಾ.ಅನಿತಾ ಎಸ್.ಮಾತನಾಡಿ, ಜೇನುತುಪ್ಪದ ಔಷಧೀಯ ಗುಣ ಪಟ್ಟಿ ಮಾಡುತ್ತಾ, ಜೇನುತುಪ್ಪ ಕೇವಲ ಸಿಹಿಗೆ ಪರ್ಯಾಯವಲ್ಲ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವ ಶೀತ-ಕೆಮ್ಮಿಗೆ ನೈಸರ್ಗಿಕ ಪರಿಹಾರ ನೀಡುವ ಹಾಗೂ ಹೃದಯದ ಆರೋಗ್ಯ ಕಾಪಾಡುವ ಅದ್ಭುತ ಆಹಾರವಾಗಿದೆ. ರೈತರು ಜೇನು ಸಂಸ್ಕರಣೆ, ಬ್ರಾಂಡಿಂಗ್ ಮತ್ತು ನೇರ ಮಾರುಕಟ್ಟೆ ಪ್ರಕ್ರಿಯೆ ಕಲಿತುಕೊಳ್ಳಬೇಕು ಎಂದು ತಿಳಿಸಿದರು.</p>.<p>ಡಾ.ಸೌಜನ್ಯ ಎಸ್., ಆಧುನಿಕ ಜೇನುಕೃಷಿ ಪಿತಾಮಹ ಆ್ಯಂಟೋನ್ ಜಾನಾ ಅವರ ಜನ್ಮದಿನದ ಸವಿನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳು ಜೇನುತುಪ್ಪ ತೆಗೆಯುವ ಸಮಯವಾಗಿದೆ. ಇದು ಸಮೃದ್ಧಿ ಸಂಕೇತ ಎಂದರು.</p>.<p>ಪ್ರಗತಿಪರ ಕೃಷಿಕ ಡಾ.ರಾಮಚಂದ್ರಯ್ಯ ಮಾತನಾಡಿ, ರಾಸಾಯನಿಕ ಮುಕ್ತ ಕೃಷಿ ಮತ್ತು ಬೆಳೆ ಪರಿವರ್ತನೆಯಿಂದ ಹೆಚ್ಚಿನ ಆದಾಯ ಗಳಿಸುವಂತೆ ರೈತರಿಗೆ ಕಿವಿಮಾತು ಹೇಳಿದರು.</p>.<p>ಡಾ.ಸುನೀಲ್ ಜೋಶಿ,ಡಾ.ಜಗದೀಶ್, ಡಾ.ಮಧು ಟಿ.ಎನ್ ವಿಜ್ಞಾನಿಗಳು ಸಮತೋಲಿತ ಗೊಬ್ಬರ ಮತ್ತು ವಿಜ್ಞಾನಾಧಾರಿತ ಪೋಷಕಾಂಶ ಬಳಕೆ ಬಗ್ಗೆ ಅರಿವು ಮೂಡಿಸಿದರು.</p>.<p>ತೋಟಗಾರಿಕಾ ವಿಜ್ಞಾನಿ ಡಾ.ದೀಪಾ ಪೂಜಾರ ಮಾತನಾಡಿ, ಮಾವಿನ ಬೆಳೆಯಲ್ಲಿ ಸವರಿಕೆ ಮಾಡುವುದರಿಂದ ಸಮಗ್ರ ನಿರ್ವಹಣೆ ಮತ್ತು ಉತ್ತಮ ಗುಣಮಟ್ಟದ ಇಳುವರಿ ಪಡೆಯುವ ವಿಧಾನವನ್ನು ವಿವರಿಸಿದರು.</p>.<p>ಕೇಂದ್ರದ ವಿಜ್ಞಾನಿ ಡಾ.ಪ್ರಮೋದ್ ಜಿ.ಮಾತನಾಡಿ, ಹೆಚ್ಚು ಇಳುವರಿ ನೀಡುವ ಸುಧಾರಿತ ತಳಿಗಳ ಪರಿಚಯ, ಬೀಜ, ಮಣ್ಣು ಮತ್ತು ನೀರು ಸಂರಕ್ಷಣೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.</p>.<p>ತರಬೇತಿ ಹಾಗೂ ದಿನಾಚರಣೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ 20ಕ್ಕೂ ಹೆಚ್ಚು ಪ್ರಗತಿಪರ ರೈತರು ಮತ್ತು ಮಹಿಳೆಯರು ಭಾಗವಹಿಸಿ ತಾಂತ್ರಿಕ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಂಡರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-14-840934566</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>