<p><strong>ಮಾಗಡಿ</strong>: ಇಲ್ಲಿಯ ವಿದ್ಯಾನಗರದ ಕಲ್ಯಾಣಗೇಟ್ ಗ್ರಾಮದೇವತೆ ಹಾಗೂ ಕೋಟೆ ಮಾರಮ್ಮ ಆರಾಧನಾ ಮಹೋತ್ಸವ ಮತ್ತು ‘ನಮ್ಮೂರ ಹಬ್ಬ’ ಮೇ 12 ಮತ್ತು 13ರಂದು ನಡೆಯಲಿದೆ.</p>.<p>ಮಂಗಳವಾರ ಸಂಜೆ 4ಕ್ಕೆ ಗ್ರಾಮದೇವತೆ ಹಾಗೂ ಕೋಟೆ ಮಾರಮ್ಮ ಉತ್ಸವ ಮೂರ್ತಿಗಳನ್ನು ಕಲ್ಯಾಣಗೇಟ್ ವಿನಾಯಕ ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತರಲಾಗುವುದು. ನಂತರ ವಿದ್ಯಾನಗರದ ಮುನೇಶ್ವರ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪಿಸಲಾಗುವುದು.</p>.<p>ಬುಧವಾರ ಮಧ್ಯಾಹ್ನ ಗ್ರಾಮದ ಬೀದಿಗಳಲ್ಲಿ ದೇವಿಯರ ಮೆರವಣಿಗೆ ಸಾಗಲಿದ್ದು, ದೇವಿಯರಿಗೆ 'ಮಡಲಕ್ಕಿ' ತುಂಬುವ ಕಾರ್ಯಕ್ರಮ ನಡೆಯಲಿದ್ದು. ಮೆರವಣಿಗೆಯ ನಂತರ ದೇವಿಯರನ್ನು ಮೂಲಸ್ಥಾನಕ್ಕೆ ಸೇರಿಸುವ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.</p>.<p><strong>ಆರತಿ ಸ್ಪರ್ಧೆ:</strong> ಮಂಗಳವಾರ ಸಂಜೆ ನಡೆಯುವ ಆರತಿ ಕಾರ್ಯಕ್ರಮದಲ್ಲಿ ವಿಭಿನ್ನ ಹಾಗೂ ಆಕರ್ಷಕವಾಗಿ ಆರತಿ ತರುವವರಿಗೆ ಬಹುಮಾನ ನೀಡಲಾಗುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-14-812027557</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ಇಲ್ಲಿಯ ವಿದ್ಯಾನಗರದ ಕಲ್ಯಾಣಗೇಟ್ ಗ್ರಾಮದೇವತೆ ಹಾಗೂ ಕೋಟೆ ಮಾರಮ್ಮ ಆರಾಧನಾ ಮಹೋತ್ಸವ ಮತ್ತು ‘ನಮ್ಮೂರ ಹಬ್ಬ’ ಮೇ 12 ಮತ್ತು 13ರಂದು ನಡೆಯಲಿದೆ.</p>.<p>ಮಂಗಳವಾರ ಸಂಜೆ 4ಕ್ಕೆ ಗ್ರಾಮದೇವತೆ ಹಾಗೂ ಕೋಟೆ ಮಾರಮ್ಮ ಉತ್ಸವ ಮೂರ್ತಿಗಳನ್ನು ಕಲ್ಯಾಣಗೇಟ್ ವಿನಾಯಕ ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತರಲಾಗುವುದು. ನಂತರ ವಿದ್ಯಾನಗರದ ಮುನೇಶ್ವರ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪಿಸಲಾಗುವುದು.</p>.<p>ಬುಧವಾರ ಮಧ್ಯಾಹ್ನ ಗ್ರಾಮದ ಬೀದಿಗಳಲ್ಲಿ ದೇವಿಯರ ಮೆರವಣಿಗೆ ಸಾಗಲಿದ್ದು, ದೇವಿಯರಿಗೆ 'ಮಡಲಕ್ಕಿ' ತುಂಬುವ ಕಾರ್ಯಕ್ರಮ ನಡೆಯಲಿದ್ದು. ಮೆರವಣಿಗೆಯ ನಂತರ ದೇವಿಯರನ್ನು ಮೂಲಸ್ಥಾನಕ್ಕೆ ಸೇರಿಸುವ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.</p>.<p><strong>ಆರತಿ ಸ್ಪರ್ಧೆ:</strong> ಮಂಗಳವಾರ ಸಂಜೆ ನಡೆಯುವ ಆರತಿ ಕಾರ್ಯಕ್ರಮದಲ್ಲಿ ವಿಭಿನ್ನ ಹಾಗೂ ಆಕರ್ಷಕವಾಗಿ ಆರತಿ ತರುವವರಿಗೆ ಬಹುಮಾನ ನೀಡಲಾಗುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-14-812027557</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>