<p>ಮಾಗಡಿ: ಬೆಂಗಳೂರಿ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಆರ್ಒಸಿಎಫ್ ಸಂಸ್ಥೆ ಹಾಗೂ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ತಾಲ್ಲೂಕಿನ ಬಿರಾವರದಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.</p>.<p>ಸಂಘದ ಮಹಿಳೆಯರು ಭೂಮಿ ಸಂಸ್ಥೆಯ ವಿಶ್ವಾಸ್ ಯೋಜನೆಯಡಿ ತಯಾರಿಸಿರುವ 15ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಶ್ರಕ್ ಗ್ಲೋಬಲ್ ನೆಟ್ವರ್ಕ್ ಕಂಪನಿ ಸಹಾಯಕ ವ್ಯವಸ್ಥಾಪಕ ಆರ್. ರಾಕೇಶ್ ಹಾಗೂ ಇತರ ಗಣ್ಯರು ಅನಾವರಣಗೊಳಿಸಿದರು.</p>.<p>ಬಳಿಕ ಮಾತನಾಡಿದ ಅವರು, ‘ಮಹಿಳೆಯರು ತುಂಬಾ ಪರಿಶ್ರಮವಹಿಸಿ ಪರಿಶುದ್ಧವಾದ ಉತ್ಪನ್ನಗಳನ್ನುತಯಾರಿಸಿದ್ದೀರಿ. ಗುಣಮಟ್ಟದ ಈ ಉತ್ಪನ್ನಗಳಿಗೆ ಹೆಚ್ಚಿನ ಜನರಿಗೆ ತಲುಪಲಿ. ನಮ್ಮ ಕಂಪನಿಯ ಸಿಎಸ್ಆರ್ ನಿಧಿಯಡಿ ಭೂಮಿ ಸಂಸ್ಥೆ ವಿಶ್ವಾಸ್ ಯೋಜನೆ ಅನುಷ್ಠಾನಗೊಳಿಸಿದೆ. ಮುಂದೆ ಕಂಪನಿಯಿಂದಲೂ ಉತ್ಪನ್ನ ಖರೀದಿಸಲಾಗುವುದು’ ಎಂದು ಭರವಸೆ ನೀಡಿದರು.</p>.<p>ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ಬತುಳ ಮಾತನಾಡಿ, ‘ನಿಮ್ಮೆಲ್ಲರ ಉತ್ಸಾಹ, ಶ್ರಮ, ಸಾಧನೆಗೆ ಹೋಲಿಸಿದರೆ ನಮ್ಮ ಸಿಎಸ್ಆರ್ ನಿಧಿ ಬಹಳ ಕಡಿಮೆಯೇ. ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ’ ಎಂದು ಶುಭ ಕೋರಿದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ ಕೆ. ‘ಎಲ್ಲಾ ಉತ್ಪನ್ನಗಳನ್ನು ‘ಭೂಮಿಜಾ’ ಬ್ರ್ಯಾಂಡ್ನಡಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ’ ಎಂದರು.</p>.<p>ಯೋಜನಾ ಫಲಾನುಭವಿ ಚೆನ್ನಾದೇವಿ, ಅಗ್ರಹಾರದ ಕಾಂತಲಕ್ಷ್ಮಿ ಹಾಗೂ ಕಳ್ಳಿಪಾಳ್ಯದ ಶಾರದಮ್ಮ ಅವರು ನಾಲ್ಕು ವರ್ಷದ ವಿಶ್ವಾಸ್ ಯೋಜನೆಯಿಂದ ಆಗಿರುವ ಅನುಕೂಲದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಕಂಪನಿಯ ಪ್ರೊಗ್ರಾಮ್ ಮ್ಯಾನೇಜರ್ ಪಂಕಜ್ ಮೆಹ್ತಾ ಮಾತನಾಡಿದರು.</p>.<p>ಭೂಮಿ ಸಂಸ್ಥೆ ನಿರ್ದೇಶಕಿಯರಾದ ಗೀತಾರಾಣಿ, ಶ್ವೇತಾ ಮತ್ತು ಆರ್ಒಸಿಎಫ್ ಸಂಸ್ಥೆಯ ಕವಿತಾ ಇದ್ದರು.</p>.<p>ಸಂಪನ್ಮೂಲ ಕೇಂದ್ರ ಉದ್ಘಾಟನೆ: ಕಾರ್ಯಕ್ರಮಕ್ಕೆ ಮುನ್ನ ಬಿರವಾರದ ಅಶೋಕ್ ಅವರ ತೋಟದಲ್ಲಿ ಸ್ಥಾಪಿಸಿರುವ ಸಮುದಾಯ ಸಂಪನ್ಮೂಲ ಕೇಂದ್ರವನ್ನು ಕಂಪನಿ ಅಧಿಕಾರಿಗಳು ಉದ್ಘಾಟಿಸಿದರು. ಮಹಿಳಾ ಸ್ವಸಹಾಯ ಸಂಘದ ಕಸ್ತೂರಿ ಅವರು, ಸಂಪನ್ಮೂಲ ಕೇಂದ್ರದಲ್ಲಿ ಉತ್ಪನ್ನಗಳ ತಯಾರಿಕಾ ಯಂತ್ರಗಳನ್ನು ಪರಿಚಯಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-14-1361378197</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಗಡಿ: ಬೆಂಗಳೂರಿ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಆರ್ಒಸಿಎಫ್ ಸಂಸ್ಥೆ ಹಾಗೂ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ತಾಲ್ಲೂಕಿನ ಬಿರಾವರದಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.</p>.<p>ಸಂಘದ ಮಹಿಳೆಯರು ಭೂಮಿ ಸಂಸ್ಥೆಯ ವಿಶ್ವಾಸ್ ಯೋಜನೆಯಡಿ ತಯಾರಿಸಿರುವ 15ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಶ್ರಕ್ ಗ್ಲೋಬಲ್ ನೆಟ್ವರ್ಕ್ ಕಂಪನಿ ಸಹಾಯಕ ವ್ಯವಸ್ಥಾಪಕ ಆರ್. ರಾಕೇಶ್ ಹಾಗೂ ಇತರ ಗಣ್ಯರು ಅನಾವರಣಗೊಳಿಸಿದರು.</p>.<p>ಬಳಿಕ ಮಾತನಾಡಿದ ಅವರು, ‘ಮಹಿಳೆಯರು ತುಂಬಾ ಪರಿಶ್ರಮವಹಿಸಿ ಪರಿಶುದ್ಧವಾದ ಉತ್ಪನ್ನಗಳನ್ನುತಯಾರಿಸಿದ್ದೀರಿ. ಗುಣಮಟ್ಟದ ಈ ಉತ್ಪನ್ನಗಳಿಗೆ ಹೆಚ್ಚಿನ ಜನರಿಗೆ ತಲುಪಲಿ. ನಮ್ಮ ಕಂಪನಿಯ ಸಿಎಸ್ಆರ್ ನಿಧಿಯಡಿ ಭೂಮಿ ಸಂಸ್ಥೆ ವಿಶ್ವಾಸ್ ಯೋಜನೆ ಅನುಷ್ಠಾನಗೊಳಿಸಿದೆ. ಮುಂದೆ ಕಂಪನಿಯಿಂದಲೂ ಉತ್ಪನ್ನ ಖರೀದಿಸಲಾಗುವುದು’ ಎಂದು ಭರವಸೆ ನೀಡಿದರು.</p>.<p>ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ಬತುಳ ಮಾತನಾಡಿ, ‘ನಿಮ್ಮೆಲ್ಲರ ಉತ್ಸಾಹ, ಶ್ರಮ, ಸಾಧನೆಗೆ ಹೋಲಿಸಿದರೆ ನಮ್ಮ ಸಿಎಸ್ಆರ್ ನಿಧಿ ಬಹಳ ಕಡಿಮೆಯೇ. ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ’ ಎಂದು ಶುಭ ಕೋರಿದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ ಕೆ. ‘ಎಲ್ಲಾ ಉತ್ಪನ್ನಗಳನ್ನು ‘ಭೂಮಿಜಾ’ ಬ್ರ್ಯಾಂಡ್ನಡಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ’ ಎಂದರು.</p>.<p>ಯೋಜನಾ ಫಲಾನುಭವಿ ಚೆನ್ನಾದೇವಿ, ಅಗ್ರಹಾರದ ಕಾಂತಲಕ್ಷ್ಮಿ ಹಾಗೂ ಕಳ್ಳಿಪಾಳ್ಯದ ಶಾರದಮ್ಮ ಅವರು ನಾಲ್ಕು ವರ್ಷದ ವಿಶ್ವಾಸ್ ಯೋಜನೆಯಿಂದ ಆಗಿರುವ ಅನುಕೂಲದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಕಂಪನಿಯ ಪ್ರೊಗ್ರಾಮ್ ಮ್ಯಾನೇಜರ್ ಪಂಕಜ್ ಮೆಹ್ತಾ ಮಾತನಾಡಿದರು.</p>.<p>ಭೂಮಿ ಸಂಸ್ಥೆ ನಿರ್ದೇಶಕಿಯರಾದ ಗೀತಾರಾಣಿ, ಶ್ವೇತಾ ಮತ್ತು ಆರ್ಒಸಿಎಫ್ ಸಂಸ್ಥೆಯ ಕವಿತಾ ಇದ್ದರು.</p>.<p>ಸಂಪನ್ಮೂಲ ಕೇಂದ್ರ ಉದ್ಘಾಟನೆ: ಕಾರ್ಯಕ್ರಮಕ್ಕೆ ಮುನ್ನ ಬಿರವಾರದ ಅಶೋಕ್ ಅವರ ತೋಟದಲ್ಲಿ ಸ್ಥಾಪಿಸಿರುವ ಸಮುದಾಯ ಸಂಪನ್ಮೂಲ ಕೇಂದ್ರವನ್ನು ಕಂಪನಿ ಅಧಿಕಾರಿಗಳು ಉದ್ಘಾಟಿಸಿದರು. ಮಹಿಳಾ ಸ್ವಸಹಾಯ ಸಂಘದ ಕಸ್ತೂರಿ ಅವರು, ಸಂಪನ್ಮೂಲ ಕೇಂದ್ರದಲ್ಲಿ ಉತ್ಪನ್ನಗಳ ತಯಾರಿಕಾ ಯಂತ್ರಗಳನ್ನು ಪರಿಚಯಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-14-1361378197</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>