ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ತರಕಾರಿ, ಕುರಿ, ಮೇಕೆ, ಹೂವು, ಹಣ್ಣು ಮಾರಾಟಕ್ಕೆ ತರುವ ರೈತರಿಂದ ಪುರಸಭೆಯವರು ಹೆಚ್ಚುವರಿ ಸುಂಕ ವಸೂಲು ಮಾಡುತ್ತಿದ್ದಾರೆ. ಆದರೆ ಅಗತ್ಯವಿರುವ ಶೌಚಾಲಯ, ನೀರು, ನೆರಳು, ಬೆಳಕಿನ ವ್ಯವಸ್ಥೆ ಮಾಡುತ್ತಿಲ್ಲ. ಕಂದಕ ಮುಚ್ಚಿ ನಿರ್ಮಿಸಿರುವ ರಸ್ತೆಯಲ್ಲಿ ರಾತ್ರಿ 2.30ರಿಂದಲೇ ತರಕಾರಿ ಸಗಟು ವ್ಯಾಪಾರ ಆರಂಭವಾಗುತ್ತಿದೆ. ರಸ್ತೆ ಬದಿ ಬೆಳಕಿನ ವ್ಯವಸ್ಥೆ ಇಲ್ಲ. ಸಗಟು ಖರೀದಿಸುವ ದಳ್ಳಾಳಿಗಳು ರೈತರನ್ನು ವಂಚಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.