ಚನ್ನಪಟ್ಟಣ: ಪಟ್ಟಣದ ಕೋವಿಡ್ ಕೇರ್ ಕ್ಲಿನಿಕ್ ಸಂಸ್ಥೆಯ ಪದಾಧಿಕಾರಿಗಳು ಆಯುಷ್ ಇಲಾಖೆ ಸಹಕಾರದೊಂದಿಗೆ ನಿರ್ಗತಿಕರು, ಕಡು ಬಡವರು, ಕೂಲಿ ಕಾರ್ಮಿಕರು ಹಾಗೂ ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಇಮ್ಯುನಿಟಿ ಬೂಸ್ಟ್, ಅರಾಕ್ ಇ ಅಜೀಬ್ ಔಷಧಿ ಮತ್ತು ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು.