ಸಾರ್ವಜನಿಕ ಸ್ಥಳ, ರಸ್ತೆ, ಖಾಲಿ ಮೈದಾನ, ಮನೆಯಂಗಳ, ನದಿ ತಟ ಮುಂತಾದ ಸ್ಥಳಗಳಲ್ಲಿ ಬಲಿ ಪ್ರಾಣಿಗಳನ್ನು ತಂದು ಇರಿಸಿಕಕೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಪ್ರಾಣಿಗಳನ್ನು ಮುಟ್ಟುಗೋಲು ಹಾಕಿಕೊಂಡು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಭಾರತೀಯ ಯುವ ಪಡೆಯ ರಾಜ್ಯ ಘಟಕದ ಅಧ್ಯಕ್ಷ ಆರ್ಯನ್ ಧನುಷ್ ಒತ್ತಾಯಿಸಿದರು.