<p><strong>ಚನ್ನಪಟ್ಟಣ:</strong> ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಅಮೆರಿಕ–ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ವಿಶ್ವವಿಖ್ಯಾತ ಚನ್ನಪಟ್ಟಣ ಗೊಂಬೆ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ.ಗೊಂಬೆಗಳ ವಿದೇಶಿ ರಫ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.</p>.<p>ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನ ಸೇರಿದಂತೆ ಹಲವು ಉದ್ಯಮಗಳ ಮೇಲೆ ಯುದ್ಧದ ಪರಿಣಾಮ ಎದುರಾಗಿದೆ. ಇದೀಗ ಗೊಂಬೆಗಳ ಉದ್ಯಮದ ಮೇಲೂ ಹೊಡೆತ ಬಿದ್ದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೇಡಿಕೆ ಇರುವ ಗೊಂಬೆಗಳನ್ನು ರಫ್ತು ಮಾಡಲು ತೊಂದರೆ ಎದುರಾಗಿದೆ. ವಿದೇಶಿ ಗ್ರಾಹಕರು ಇಲ್ಲಿನ ಗೊಂಬೆಗಳನ್ನು ಆರ್ಡರ್ ಮಾಡಲು ಹಿಂಜರಿಯುತ್ತಿದ್ದಾರೆ. ಅಮೆರಿಕ ಸೇರಿದಂತೆ ಹಲವು ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಗೊಂಬೆಗಳು, ಮಕ್ಕಳ ಆಟಿಕೆಗಳು ಕಾರ್ಖಾನೆಗಳಲ್ಲಿಯೇ ಉಳಿಯುವಂತಾಗಿದೆ. </p>.<p>ತಾಲ್ಲೂಕಿನ ಮುನಿಯಪ್ಪನದೊಡ್ಡಿ, ಕರಿಯಪ್ಪನದೊಡ್ಡಿ, ಕಲಾನಗರ, ತಟ್ಟೆಕೆರೆ, ಕೋಟೆ, ಮಂಗಳವಾರಪೇಟೆ, ಮಹದೇಶ್ವರ ದೇವಸ್ಥಾನದ ಬಳಿಯ ಚನ್ನಪಟ್ಟಣ ಕ್ರಾಫ್ಟ್ ಪಾರ್ಕ್ನಲ್ಲಿ ತಯಾರಾಗುವ ಗೊಂಬೆಗಳು ವಿದೇಶಗಳಿಗೆ ನೇರವಾಗಿ ರಫ್ತಾಗುತ್ತವೆ. ಅಂಚೆ ಕಚೇರಿ ವತಿಯಿಂದ ಸ್ಥಾಪಿಸಿರುವ ವಿದೇಶಿ ಪಾರ್ಸೆಲ್ ಸೇವೆಯಿಂದ ವಿದೇಶಿ ಗ್ರಾಹಕರು ಆನ್ಲೈನ್ ಮೂಲಕ ನೇರವಾಗಿ ಗೊಂಬೆ ತಯಾರಕರ ಬಳಿಯೇ ಬುಕ್ಕಿಂಗ್ ಮಾಡಬಹುದು.</p>.<p>ಈ ಗೊಂಬೆಗಳನ್ನು ನಂತರ ಹಡಗುಗಳ ಮೂಲಕ ಸಾಗಟ ಮಾಡಲಾಗುತ್ತದೆ. ಆದರೆ, ಕಳೆದ ಹದಿನೈದು ದಿನಗಳಿಂದ ಗೊಂಬೆಗಳಿಗೆ ವಿದೇಶಿ ಆರ್ಡರ್ ಕಡಿಮೆಯಾಗಿದೆ ಎಂದು ಇಲ್ಲಿನ ಕ್ರಾಪ್ಟ್ ಪಾರ್ಕ್ನಲ್ಲಿ ಗೊಂಬೆ ತಯಾರಿಸುವ ಉದ್ಯಮ ನಡೆಸುವ ವೆಂಕಟೇಶ್ ಹೇಳಿದರು.</p>.<p>ಗೊಂಬೆಗಳನ್ನು ಸಾಗಟ ಮಾಡಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕು. ಈಗ ಏಪ್ರಿಲ್ ಹಾಗೂ ಮೇ ತಿಂಗಳಿಗೆ ಬರಬೇಕಿದ್ದ ವಿದೇಶಿ ಆರ್ಡರ್ ಬಂದಿಲ್ಲ. ಮುಂದಿನ ದಿನಗಳಲ್ಲಿ ಬರಲಿರುವ ಈಸ್ಟರ್, ಕ್ರಿಸ್ಮಸ್ ಹಬ್ಬಗಳಿಗೂ ವಿದೇಶಿ ಗ್ರಾಹಕರು ತಮಗೆ ಬೇಕಾದ ಗೊಂಬೆ ಹಾಗೂ ಮರದ ಆಕೃತಿಗಳನ್ನು ಮೊದಲೇ ಆರ್ಡರ್ ಮಾಡುತ್ತಿದ್ದರು. ಆದರೆ, ಆ ಆರ್ಡರ್ ಸಹ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಜತೆಗೆ ಈಗಾಗಲೇ ಆರ್ಡರ್ ನೀಡಿರುವ ಹಲವು ವಿದೇಶಿ ಗ್ರಾಹಕರು ಆರ್ಡರ್ ತಡೆಹಿಡಿಯುವಂತೆ ತಿಳಿಸುತ್ತಿದ್ದಾರೆ ಎಂದು ಮತ್ತೊಬ್ಬ ಗೊಂಬೆ ಉದ್ಯಮಿ ಶ್ರೀನಿವಾಸ್ ತಿಳಿಸಿದರು.</p>.<p>ಗೊಂಬೆಗಳನ್ನು ಸಾಗಣೆ ಮಾಡುವ ಹಡುಗಳ ಮೇಲೆ ಆಕಸ್ಮಿಕ ದಾಳಿಯಾದರೆ ಲಕ್ಷಾಂತರ ಮೌಲ್ಯದ ಗೊಂಬೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹಡಗುಗಳು ಸಮುದ್ರದಲ್ಲಿ ಸಿಲುಕಿಕೊಳ್ಳಬಹುದು ಎನ್ನುವ ಆತಂಕ ಕೂಡ ಇದೆ. ರಫ್ತು ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಎಂದು ಗೊಂಬೆ ಉದ್ಯಮಿ ಕರಿಯಪ್ಪನದೊಡ್ಡಿ ಚಂದ್ರು ತಿಳಿಸಿದರು.</p>.<p>ಯುದ್ಧದ ಭೀತಿ ಮುಂದುವರಿದರೆ ಇಲ್ಲಿ ಗೊಂಬೆ ಉದ್ಯಮದ ಜತೆಗೆ ಗೊಂಬೆ ತಯಾರಿಕಾ ಕಾರ್ಮಿಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಯುದ್ಧ ನಿಂತ ನಂತರವೂ ವಿದೇಶಕ್ಕೆ ರಫ್ತಾಗುವ ಗೊಂಬೆ ಉದ್ಯಮ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗಬಹುದು ಎಂದು ಗೊಂಬೆ ಉದ್ಯಮಿಗಳು ಅಭಿಪ್ರಾಯಪಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಅಮೆರಿಕ–ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ವಿಶ್ವವಿಖ್ಯಾತ ಚನ್ನಪಟ್ಟಣ ಗೊಂಬೆ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ.ಗೊಂಬೆಗಳ ವಿದೇಶಿ ರಫ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.</p>.<p>ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನ ಸೇರಿದಂತೆ ಹಲವು ಉದ್ಯಮಗಳ ಮೇಲೆ ಯುದ್ಧದ ಪರಿಣಾಮ ಎದುರಾಗಿದೆ. ಇದೀಗ ಗೊಂಬೆಗಳ ಉದ್ಯಮದ ಮೇಲೂ ಹೊಡೆತ ಬಿದ್ದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೇಡಿಕೆ ಇರುವ ಗೊಂಬೆಗಳನ್ನು ರಫ್ತು ಮಾಡಲು ತೊಂದರೆ ಎದುರಾಗಿದೆ. ವಿದೇಶಿ ಗ್ರಾಹಕರು ಇಲ್ಲಿನ ಗೊಂಬೆಗಳನ್ನು ಆರ್ಡರ್ ಮಾಡಲು ಹಿಂಜರಿಯುತ್ತಿದ್ದಾರೆ. ಅಮೆರಿಕ ಸೇರಿದಂತೆ ಹಲವು ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಗೊಂಬೆಗಳು, ಮಕ್ಕಳ ಆಟಿಕೆಗಳು ಕಾರ್ಖಾನೆಗಳಲ್ಲಿಯೇ ಉಳಿಯುವಂತಾಗಿದೆ. </p>.<p>ತಾಲ್ಲೂಕಿನ ಮುನಿಯಪ್ಪನದೊಡ್ಡಿ, ಕರಿಯಪ್ಪನದೊಡ್ಡಿ, ಕಲಾನಗರ, ತಟ್ಟೆಕೆರೆ, ಕೋಟೆ, ಮಂಗಳವಾರಪೇಟೆ, ಮಹದೇಶ್ವರ ದೇವಸ್ಥಾನದ ಬಳಿಯ ಚನ್ನಪಟ್ಟಣ ಕ್ರಾಫ್ಟ್ ಪಾರ್ಕ್ನಲ್ಲಿ ತಯಾರಾಗುವ ಗೊಂಬೆಗಳು ವಿದೇಶಗಳಿಗೆ ನೇರವಾಗಿ ರಫ್ತಾಗುತ್ತವೆ. ಅಂಚೆ ಕಚೇರಿ ವತಿಯಿಂದ ಸ್ಥಾಪಿಸಿರುವ ವಿದೇಶಿ ಪಾರ್ಸೆಲ್ ಸೇವೆಯಿಂದ ವಿದೇಶಿ ಗ್ರಾಹಕರು ಆನ್ಲೈನ್ ಮೂಲಕ ನೇರವಾಗಿ ಗೊಂಬೆ ತಯಾರಕರ ಬಳಿಯೇ ಬುಕ್ಕಿಂಗ್ ಮಾಡಬಹುದು.</p>.<p>ಈ ಗೊಂಬೆಗಳನ್ನು ನಂತರ ಹಡಗುಗಳ ಮೂಲಕ ಸಾಗಟ ಮಾಡಲಾಗುತ್ತದೆ. ಆದರೆ, ಕಳೆದ ಹದಿನೈದು ದಿನಗಳಿಂದ ಗೊಂಬೆಗಳಿಗೆ ವಿದೇಶಿ ಆರ್ಡರ್ ಕಡಿಮೆಯಾಗಿದೆ ಎಂದು ಇಲ್ಲಿನ ಕ್ರಾಪ್ಟ್ ಪಾರ್ಕ್ನಲ್ಲಿ ಗೊಂಬೆ ತಯಾರಿಸುವ ಉದ್ಯಮ ನಡೆಸುವ ವೆಂಕಟೇಶ್ ಹೇಳಿದರು.</p>.<p>ಗೊಂಬೆಗಳನ್ನು ಸಾಗಟ ಮಾಡಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕು. ಈಗ ಏಪ್ರಿಲ್ ಹಾಗೂ ಮೇ ತಿಂಗಳಿಗೆ ಬರಬೇಕಿದ್ದ ವಿದೇಶಿ ಆರ್ಡರ್ ಬಂದಿಲ್ಲ. ಮುಂದಿನ ದಿನಗಳಲ್ಲಿ ಬರಲಿರುವ ಈಸ್ಟರ್, ಕ್ರಿಸ್ಮಸ್ ಹಬ್ಬಗಳಿಗೂ ವಿದೇಶಿ ಗ್ರಾಹಕರು ತಮಗೆ ಬೇಕಾದ ಗೊಂಬೆ ಹಾಗೂ ಮರದ ಆಕೃತಿಗಳನ್ನು ಮೊದಲೇ ಆರ್ಡರ್ ಮಾಡುತ್ತಿದ್ದರು. ಆದರೆ, ಆ ಆರ್ಡರ್ ಸಹ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಜತೆಗೆ ಈಗಾಗಲೇ ಆರ್ಡರ್ ನೀಡಿರುವ ಹಲವು ವಿದೇಶಿ ಗ್ರಾಹಕರು ಆರ್ಡರ್ ತಡೆಹಿಡಿಯುವಂತೆ ತಿಳಿಸುತ್ತಿದ್ದಾರೆ ಎಂದು ಮತ್ತೊಬ್ಬ ಗೊಂಬೆ ಉದ್ಯಮಿ ಶ್ರೀನಿವಾಸ್ ತಿಳಿಸಿದರು.</p>.<p>ಗೊಂಬೆಗಳನ್ನು ಸಾಗಣೆ ಮಾಡುವ ಹಡುಗಳ ಮೇಲೆ ಆಕಸ್ಮಿಕ ದಾಳಿಯಾದರೆ ಲಕ್ಷಾಂತರ ಮೌಲ್ಯದ ಗೊಂಬೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹಡಗುಗಳು ಸಮುದ್ರದಲ್ಲಿ ಸಿಲುಕಿಕೊಳ್ಳಬಹುದು ಎನ್ನುವ ಆತಂಕ ಕೂಡ ಇದೆ. ರಫ್ತು ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಎಂದು ಗೊಂಬೆ ಉದ್ಯಮಿ ಕರಿಯಪ್ಪನದೊಡ್ಡಿ ಚಂದ್ರು ತಿಳಿಸಿದರು.</p>.<p>ಯುದ್ಧದ ಭೀತಿ ಮುಂದುವರಿದರೆ ಇಲ್ಲಿ ಗೊಂಬೆ ಉದ್ಯಮದ ಜತೆಗೆ ಗೊಂಬೆ ತಯಾರಿಕಾ ಕಾರ್ಮಿಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಯುದ್ಧ ನಿಂತ ನಂತರವೂ ವಿದೇಶಕ್ಕೆ ರಫ್ತಾಗುವ ಗೊಂಬೆ ಉದ್ಯಮ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗಬಹುದು ಎಂದು ಗೊಂಬೆ ಉದ್ಯಮಿಗಳು ಅಭಿಪ್ರಾಯಪಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>