ಸೋಲೂರು ಹೋಬಳಿಯ ಇರ್ಫಾನ್ ಮತ್ತು ಇತರರ ವಿರುದ್ಧ ಮಾಗಡಿ ತಾಲ್ಲೂಕು ಕಚೇರಿಯಲ್ಲಿ ದಾಖಲಾಗಿರುವ ಕಲಂ 107 ಸಿಆರ್ಪಿಸಿ ಪ್ರಕರಣವನ್ನು ಮಾಗಡಿ ತಹಶೀಲ್ದಾರ್ಗೆ ಹೇಳಿ ಮುಕ್ತಾಯ ಮಾಡಿಸುವುದಾಗಿ ಆರೋಪಿ ಭರವಸೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ₹1 ಲಕ್ಷ ಲಂಚ ಕೇಳಿದ್ದರು. ಕಡೆಗೆ ₹60 ಸಾವಿರಕ್ಕೆ ಒಪ್ಪಿದ್ದರು.
ಇದನ್ನು ಇರ್ಫಾನ್ ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದಿದ್ದರು. ಅವರ ಸೂಚನೆಯಂತೆ ಮಂಗಳವಾರ ಸಂಜೆ ಮಾಗಡಿ ತಾಲ್ಲೂಕು ಕಚೇರಿ ಆವರಣದಲ್ಲಿ ₹20 ಸಾವಿರ ಲಂಚ ನೀಡುತ್ತಿದ್ದ ವೇಳೆ ರಾಮನಗರ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಿತು. ಆರೋಪಿ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.