ಆಧಾರ್ ನೋಂದಣಿ, ಆಧಾರ್ ತಿದ್ದುಪಡಿ, ಪಹಣಿ, ವಂಶವೃಕ್ಷ, ವಾಸ ದೃಢೀಕರಣ, ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಬರುತ್ತಾರೆ. ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಆಗಮಿಸಿದ್ದ ಜನರು ನೆಲಅಂತಸ್ತಿನಲ್ಲಿ ನೀರು ನಿಂತ ಕಾರಣಕ್ಕೆ ಕಸಿವಿಸಿಗೊಂಡರು. ನೀರಿನಲ್ಲಿಯೇ ನಿಂತು ಕೊಂಡು ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಿದರು.