ರಾಮನಗರ: ನಗರದಲ್ಲಿ ಸೋಮವಾರ ರಾತ್ರಿ ಮತ್ತೆ ವರುಣ ಆರ್ಭಟಿಸಿದ್ದು, ಗುಡುಗು–ಸಹಿತ ಜೋರು ಮಳೆ ಸುರಿಯಿತು.
ರಾತ್ರಿ ಹತ್ತು ಗಂಟೆ ವೇಳೆಗೆ ಮಳೆ ಆರಂಭಗೊಂಡಿದ್ದು, ಹೊತ್ತು ಕಳೆದಂತೆಲ್ಲ ಅದರ ಆರ್ಭಟವೂ ಹೆಚ್ಚಾಗುತ್ತ ಹೋಯಿತು. ಭಾರಿ ಸಿಡಿಲಿನ ಶಬ್ದ ಕೇಳಿ ಜನರು ಬೆಚ್ಚಿ ಬೀಳುವಂತೆ ಆಯಿತು. ಕೆರೆಗಳ ತಗ್ಗು ಪ್ರದೇಶಗಳಲ್ಲಿನ ಜನರು ಭಯದಲ್ಲೇ ಸಮಯ ದೂಡುವಂತೆ ಆಯಿತು.
ರಾಮನಗರ ತಾಲ್ಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆ ನಿರಂತರವಾಗಿದ್ದು, ಮತ್ತೆ ವರ್ಷಧಾರೆಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.