ಸಂಸದರು, ಶಾಸಕರೂ ಸೇರಿದಂತೆ ಜಿಲ್ಲೆಯ ಪ್ರತಿ ಜನಪ್ರತಿನಿಧಿಗೂ ಸರ್ಕಾರ ಅಧಿಕೃತ ಕಚೇರಿಯನ್ನು ಒದಗಿಸಿದೆ. ಇಲ್ಲಿ ಶಾಸಕರು ಇಲ್ಲವೇ ಅವರ ಪ್ರತಿನಿಧಿ, ಸಿಬ್ಬಂದಿ ಹಾಜರಿದ್ದು ಜನರ ದೂರು ದುಮ್ಮಾನಗಳಿಗೆ ಸ್ಪಂದಿಸಬೇಕಿದೆ. ಆದರೆ ಜಿಲ್ಲೆಯಲ್ಲಿರುವ ಬಹುತೇಕ ಶಾಸಕರ ಕಚೇರಿಗಳು ಕಾಟಾಚಾರಕ್ಕೆ ಎಂಬಂತೆ ಇದ್ದು, ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡುವುದೇ ಅಪರೂಪವಾಗಿದೆ.