ಹಾರೋಹಳ್ಳಿ (ಕನಕಪುರ): ತಾಲ್ಲೂಕಿನ ಹಾರೋಹಳ್ಳಿ ಯಲ್ಲಿ ನಮೋ ಬ್ರಿಗೇಡ್ ತಂಡದಿಂದ ‘ಈ ಬಾರಿ ನರೇಂದ್ರ ಮೋದಿ’ ಎಂದು ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ಭಾನುವಾರ ನಡೆಸಿದರು.
ನಮೋ ಬ್ರಿಗೇಡ್ನ 22 ಮಂದಿ ಹಾರೋಹಳ್ಳಿ ಬಿಜೆಪಿ ಕಾರ್ಯಕರ್ತರೊಂದಿಗೆ ಮನೆ ಮತ್ತು ಅಂಗಡಿ ಗಳಿಗೆ ಭೇಟಿ ನೀಡಿದರು. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಈ ದೇಶಕ್ಕೆ ಏಕೆ ಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು.
ಮೋದಿ ಅವರು ಪ್ರಧಾನಿಯಾಗಿ ದೇಶದ ರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿ ಗೆ ಎಂಥಹ ಕಠಿಣ ನಿರ್ಧಾರ ಕೈಗೊಂಡಿದ್ಧಾರೆ ಎಂದು ತಿಳಿಸಿದರು.
ದೇಶದ ಪ್ರಗತಿಗೆ ಅನೇಕ ಕಾರ್ಯಕ್ರಮ ಕೈಗೊಂಡಿದ್ಧಾರೆ. ಸಾಕಷ್ಟು ಕಾರ್ಯಕ್ರಮಗಳು ಜನರಿಗೆ ತಲುಪಿಲ್ಲ. ವಿಶ್ವ ಮಟ್ಟದಲ್ಲಿ ದೇಶಕ್ಕೆ ಉತ್ತಮ ಸ್ಥಾನ ದೊರಕಿಸಿಕೊಟ್ಟಿದ್ಧಾರೆ ಎಂದು ವಿವರಿಸಿದರು.
ಪ್ರಧಾನ ಮಂತ್ರಿಯಾಗಿ ಅವರೇ ಏಕೆ ಬೇಕೆಂದು ಸಾರ್ವಜನಿಕರು ಸಂವಾದ ನಡೆಸಿ ಚರ್ಚಿಸಿದರು. ಕರಪತ್ರಗಳನ್ನು ಜನತೆಗೆ ಹಂಚಿ ಮೋದಿ ಪರವಾಗಿ ಘೋಷಣೆ ಕೂಗಿದರು.
ಹಾರೋಹಳ್ಳಿ ಬಿಜೆಪಿ ಘಟಕದ ಮುರಳೀಧರ, ಜಿ.ನಾಗರಾಜು, ಸಂಪತ್ ಕುಮಾರ್, ರಾಮು, ಸಾವಿತ್ರಮ್ಮ ಉಪಸ್ಥಿತರಿದ್ದರು.