ಕೆಂಪು ವಲಯ ಯಾಕೆ ತೆಗೆಯಲಿಲ್ಲ?
‘ಉಪನಗರ ಯೋಜನೆ ಅನುಷ್ಠಾನಕ್ಕೆ ಶತಾಯಗತಾಯ ಪ್ರಯತ್ನಪಟ್ಟಿದ್ದ ಕುಮಾರಸ್ವಾಮಿ ಅವರು, ಯೋಜನೆ ಹೊಣೆಯನ್ನು ಡಿಎಲ್ಎಫ್ ಕಂಪನಿಗೆ ಕೊಟ್ಟು ₹400 ಕೋಟಿ ಯಾಕೆ ಪಡೆದರು? ಆ ಕಂಪನಿಯವರು ಯಾಕೆ ಕೈ ಚೆಲ್ಲಿ ಹಣ ಹಿಂಪಡೆದರು ಎಂಬುದನ್ನು ಜನರಿಗೆ ಉತ್ತರಿಸಲಿ. ಯೋಜನೆಗೆ ರೈತರು ವಿರೋಧಿಸಿದ್ದಕ್ಕಾಗಿ ಕೈ ಬಿಟ್ಟಿದ್ದಾಗಿ ಸುಳ್ಳು ಹೇಳುತ್ತಿರುವ ಅವರು, ಇಡೀ ಪ್ರದೇಶವನ್ನು ಯಾಕೆ ಕೆಂಪುವಲಯ ಎಂದು ಗುರುತಿಸಿದರು? ಎರಡನೇ ಸಲ ಸಿ.ಎಂ ಆದಾಗ ಯಾಕೆ ಕೆಂಪು ವಲಯ ನಿರ್ಬಂಧ ಯಾಕೆ ತೆಗೆಯಲಿಲ್ಲ ಅಥವಾ ಅಧಿಸೂಚನೆ ರದ್ದುಗೊಳಿಸಲಿಲ್ಲ? ಈಗ ಯೋಜನೆ ವಿರುದ್ಧ ಹೋರಾಟಕ್ಕಿಳಿಯುವ ಯಾವ ನೈತಿಕತೆ ಅವರಿಗಿದೆ?’ ಎಂದು ದುಂತೂರು ವಿಶ್ವನಾಥ್ ಪ್ರಶ್ನಿಸಿದರು.